More

    ಈ ಬಿಜೆಪಿ ಅಭ್ಯರ್ಥಿ ಸೋತರೂ ತುಂಬ ಖುಷಿಯಾಗಿದ್ದಾರಂತೆ…ಕಾರಣ ಕಮಲನಾಥ್ ಅವರಂತೆ..!

    ಭೋಪಾಲ್​: ಕಾಂಗ್ರೆಸ್​ ಎದುರು ಸೋತರೂ ನಾನು ತುಂಬ ಖುಷಿಯಾಗಿದ್ದೇನೆಂದು ಬಿಜೆಪಿಯ ಇಮರ್ತಿ ದೇವಿ ಹೇಳಿದ್ದಾರೆ.

    ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸೋತಿರಬಹುದು. ಆದರೆ ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಅಂತಿಮವಾಗಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಕಮಲನಾಥ್​ ಅವರ ಮುಖ ಕಪ್ಪಾಗಿದೆ. ಇದರಿಂದಾಗಿ ನಾನೂ ಸಂತೋಷವಾಗಿದ್ದೇನೆ ಎಂದಿದ್ದಾರೆ.

    ಅಕ್ಟೋಬರ್​ 18ರಂದು ಚುನಾವಣಾ ಪ್ರಚಾರದ ವೇಳೆ ಕಮಲನಾಥ್​ ಅವರು ಇಮರ್ತಿ ದೇವಿಯನ್ನು ಐಟಂ ಎಂದು ಕರೆದಿದ್ದರು. ಕಮಲನಾಥ್​ ಅವರ ಈ ಹೇಳಿಕೆ ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು. ಅದಾದ ನಂತರ ಚುನಾವಣಾ ಆಯೋಗ ಕಾಂಗ್ರೆಸ್​ ಸ್ಟಾರ್​ ಪ್ರಚಾರಕರ ಪಟ್ಟಿಯಿಂದ ಕಮಲನಾಥ್​ ಅವರನ್ನು ಕೆಳಗಳಿಸಿತ್ತು.

    ಇದೀಗ ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 19 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕೇವಲ 9 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್​ ಜಯಸಾಧಿಸಿದೆ. ಇದೇ ವಿಷಯವಾಗಿ ನಾವೂ ಖುಷಿಯಾಗಿರುವುದಾಗಿ ಇಮರ್ತಿ ದೇವಿ ಹೇಳಿದ್ದಾರೆ.  ಇನ್ನು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಟ್ವೀಟ್​ ಮಾಡಿದ್ದ ಕಮಲನಾಥ್​, ನಾವು ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ. ಇಮರ್ತಿ ದೇವಿ ಈ ಬಾರಿ ಮಾರ್ಚ್​​ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

    50 ವರ್ಷ ಇವರೇ ಪ್ರಧಾನಿ! ಸುದೀರ್ಘ ಆಳ್ವಿಕೆಯ ದಾಖಲೆ ನಿರ್ಮಿಸಿದ್ದ ಖಲೀಫಾ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts