ಭೋಪಾಲ್: ಕಾಂಗ್ರೆಸ್ ಎದುರು ಸೋತರೂ ನಾನು ತುಂಬ ಖುಷಿಯಾಗಿದ್ದೇನೆಂದು ಬಿಜೆಪಿಯ ಇಮರ್ತಿ ದೇವಿ ಹೇಳಿದ್ದಾರೆ.
ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಸೋತಿರಬಹುದು. ಆದರೆ ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಅಂತಿಮವಾಗಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಮುಖ ಕಪ್ಪಾಗಿದೆ. ಇದರಿಂದಾಗಿ ನಾನೂ ಸಂತೋಷವಾಗಿದ್ದೇನೆ ಎಂದಿದ್ದಾರೆ.
ಅಕ್ಟೋಬರ್ 18ರಂದು ಚುನಾವಣಾ ಪ್ರಚಾರದ ವೇಳೆ ಕಮಲನಾಥ್ ಅವರು ಇಮರ್ತಿ ದೇವಿಯನ್ನು ಐಟಂ ಎಂದು ಕರೆದಿದ್ದರು. ಕಮಲನಾಥ್ ಅವರ ಈ ಹೇಳಿಕೆ ಸಿಕ್ಕಾಪಟೆ ವಿವಾದ ಸೃಷ್ಟಿಸಿತ್ತು. ಅದಾದ ನಂತರ ಚುನಾವಣಾ ಆಯೋಗ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕಮಲನಾಥ್ ಅವರನ್ನು ಕೆಳಗಳಿಸಿತ್ತು.
ಇದೀಗ ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 19 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಕೇವಲ 9 ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಜಯಸಾಧಿಸಿದೆ. ಇದೇ ವಿಷಯವಾಗಿ ನಾವೂ ಖುಷಿಯಾಗಿರುವುದಾಗಿ ಇಮರ್ತಿ ದೇವಿ ಹೇಳಿದ್ದಾರೆ. ಇನ್ನು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಕಮಲನಾಥ್, ನಾವು ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ ಎಂದಿದ್ದಾರೆ. ಇಮರ್ತಿ ದೇವಿ ಈ ಬಾರಿ ಮಾರ್ಚ್ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.
50 ವರ್ಷ ಇವರೇ ಪ್ರಧಾನಿ! ಸುದೀರ್ಘ ಆಳ್ವಿಕೆಯ ದಾಖಲೆ ನಿರ್ಮಿಸಿದ್ದ ಖಲೀಫಾ ನಿಧನ