More

    ಖುಷಿಯಲ್ಲಿ ಮೈಸುಟ್ಟುಕೊಂಡ ಬಿಜೆಪಿ ಕಾರ್ಯಕರ್ತರು!

    ಚೆನ್ನೈ: ಪ್ರತಿಭಟನೆ ನಡೆಸುವ ವೇಳೆ ಕಾಂಗ್ರೆಸ್ ಕಾರ್ಯರ್ತರು ಮೈಕೈಗೆ ಬೆಂಕಿ ತಗುಲಿಸಿಕೊಂಡ ಪ್ರಕರಣ ಬೆಂಗಳೂರಿನಲ್ಲಿ ಈ ಹಿಂದೆ ವರದಿಯಾಗಿತ್ತು. ಇದೀಗ ಬಿಜೆಪಿಯ ಸುಮಾರು 30 ಕಾರ್ಯಕರ್ತರು ಖುಷಿಯಲ್ಲಿ ಮೈಸುಟ್ಟುಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನಾಚರಣೆ ಆಚರಿಸುವ ಜೋಶ್​ನಲ್ಲಿ ತಮಿಳುನಾಡಿನಲ್ಲಿ ಇಂಥದ್ದೊಂದು ಅನಾಹುತ ಸಂಭವಿಸಿದೆ. ಸೆ. 17ರಂದು ಚೆನ್ನೈನ ಅಂಬತ್ತೂರು ಸಮೀಪದ ಪಡಿ ಎಂಬಲ್ಲಿ ಈ ಘಟನೆ ನಡೆದಿದೆ.

    ಸಂಭ್ರಮಾಚರಣೆ ವೇಳೆ ಪಟಾಕಿಯಿಂದ ಸಿಡಿದ ಬೆಂಕಿಯ ಕಿಡಿ ಹೀಲಿಯಂ ತುಂಬಿದ ಬಲೂನ್​ಗಳ ಮೇಲೆ ಬಿದ್ದು ಅದು ಒಡೆದಿದೆ. ಪರಿಣಾಮ ಬೆಂಕಿ ಉಂಟಾಗಿದ್ದು, ಬಲೂನ್​ಗಳ ಬಳಿ ಇದ್ದ ಕಾರ್ಯಕರ್ತರಿಗೆ ಬೆಂಕಿ ತಗುಲಿದೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಸಣ್ಣಪುಟ್ಟ ಗಾಯಕ್ಕೊಳಗಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts