More

    ಮಡಿಕೇರಿಯಲ್ಲಿ ಬಿಜೆಪಿ ಬಿರುಸಿನ ಪ್ರಚಾರ

    ಮಡಿಕೇರಿ: ಪ್ರಾಮಾಣಿಕವಾಗಿ ಫಲಾನುಭವಿಗಳನ್ನು ತಲುಪುವ ಮತ್ತು ಯಾರಿಗೂ ಹೊರೆಯಿಲ್ಲದ ಏಕೈಕ ಗ್ಯಾರಂಟಿಯೆಂದರೆ ಅದು ಮೋದಿ ಗ್ಯಾರಂಟಿ ಎಂದು ಮಡಿಕೇರಿ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ತಿಳಿಸಿದರು.


    ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್‌ರವರ ಪರ ಎರಡನೇ ಹಂತದ ಮನೆ ಮನೆ ಪ್ರಚಾರ ನಡೆಸಿ ಅವರು ಮಾತನಾಡಿದರು.


    ಕಳೆದ ಹತ್ತು ವರ್ಷಗಳ ಬಿಜೆಪಿ ನೇತೃತ್ವದ ಆಡಳಿತದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದ್ದು, ಈ ಬಾರಿ ಕೂಡ ಮೋದಿ ಗ್ಯಾರಂಟಿಗೆ ಬಹುಮತ ಲಭಿಸಲಿದೆ. ಇಡೀ ದೇಶದ ಜನ ಒಪ್ಪುವಂತಹ ಗ್ಯಾರಂಟಿಗಳನ್ನು ಪ್ರಧಾನಮಂತ್ರಿ ನರೇಂದ್ರಮೋದಿರವರು ನೀಡಿದ್ದಾರೆ ಎಂದರು.


    ಮೋದಿ ಗ್ಯಾರಂಟಿಗೆ ಮತ ನೀಡಿದರೆ ವಿಕಸಿತ ಭಾರತದ ಹಿತ ಕಾಯಬಹುದಾಗಿದೆ. ಸರ್ವವ್ಯಾಪಿ, ಸರ್ವಸ್ಪರ್ಶಿ ಮತ್ತು ದೂರದೃಷ್ಟಿಯ ಸಂಕಲ್ಪ ಪತ್ರವನ್ನು ಮನೆ ಮನೆಗೆ ತಲುಪಿಸುತ್ತಿದ್ದೇವೆ. ಎಲ್ಲಾ ಕಡೆ ಅಭ್ಯರ್ಥಿ ಯದುವೀರ್‌ರವರ ಪರ ಜನ ಒಲವು ತೋರುತ್ತಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಲಿದೆ. ಮಡಿಕೇರಿ ನಗರದಲ್ಲಿ ಪ್ರಚಾರವನ್ನು ಬಿರುಸುಗೊಳಿಸಲಾಗಿದ್ದು, ಅತ್ಯಧಿಕ ಮತಗಳನ್ನು ಯದುವೀರ್ ಅವರಿಗೆ ನೀಡಲಾಗುವುದು ಎಂದು ಉಮೇಶ್ ಸುಬ್ರಮಣಿ ತಿಳಿಸಿದರು.


    ಮನೆ ಮನೆ ಪ್ರಚಾರ ಕಾರ್ಯದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ.ಜಗದೀಶ್, ಕವನ್ ಕಾರ್ಯಪ್ಪ, ಪ್ರಮುಖರಾದ ಸತೀಶ್ ಪೈ, ಕನ್ನಂಡ ಸಂಪತ್, ನಗರಸಭೆಯ ಬಿಜೆಪಿ ಸದಸ್ಯರುಗಳು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts