More

    ಬಿಜೆಪಿ ಚುನಾವಣಾ ಸಮಿತಿ ಕಾರ್ಯಾಗಾರ

    ಹುಬ್ಬಳ್ಳಿ: ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಧಾರವಾಡ ಲೋಕಸಭಾ ಚುನಾವಣೆ ನಿರ್ವಹನಾ ಸಮಿತಿಯ ಕಾರ್ಯಾಗಾರ ಇಲ್ಲಿಯ ಅರವಿಂದ ನಗರದ ಪಕ್ಷ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

    ವಿಭಾಗೀಯ ಬಿಜೆಪಿ ಸಹ ಪ್ರಭಾರಿ ನಾರಾಯಣ ಜರತಾರಘರ ಮಾತನಾಡಿ, ಚುನಾವಣೆ ನಿರ್ವಹನಾ ಸಮಿತಿ ಗಮನಿಸುವ ಪ್ರಮುಖರು, ಕಾರ್ಯಾಲಯ, ಮಾಧ್ಯಮ, ಸಾಮಾಜಿಕ ಜಾಲತಾಣ ಮತ್ತು ಹೈಟೆಕ್ ಪ್ರಚಾರ, ಬೂತ್ ಕಾರ್ಯ, ಸಾಮಾಜಿಕ ಕಾರ್ಯ, ಪ್ರಣಾಳಿಕೆ ಉಸ್ತುವಾರಿ, ವಿಡಿಯೋ ವಾಹನ, ಪ್ರಚಾರ ಸಾಮಗ್ರಿಗಳು ಮುಂತಾದ ವಿಷಯಗಳ ಬಗ್ಗೆ ತಿಳಿವಳಿಕೆ ನೀಡಿದರು.

    ಜನಸಾಮಾನ್ಯರ ಮಧ್ಯ ಬಿಜೆಪಿ ಬಹಳ ಪ್ರಬಲವಾಗಿ ಬೆಳೆದು ಮುಂದಿನ ಅಧಿಕಾರದ ಸೂತ್ರವನ್ನು ಹಿಡಿಯುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ. ಧಾರವಾಡದಲ್ಲಿ ನಿಚ್ಚಳ ಬಹುಮತ ಪಡೆಯಲಿದೆ ಎಂದರು.

    ಹು-ಧಾ ಪೂರ್ವ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ ಅಧ್ಯಕ್ಷತೆ ವಹಿಸಿದ್ದರು.

    ಮಾಜಿ ಶಾಸಕ ಅಶೋಕ ಕಾಟವೆ, ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದಶಿರ್ ಶಿವು ಮೆಣಸಿನಕಾಯಿ, ರಂಗಾ ಬದ್ದಿ, ಡಾ. ಕ್ರಾಂತಿ ಕಿರಣ, ಒಬಿಸಿ ಮೋರ್ಚಾ ಉಪಾಧ್ಯಕ್ಷ ಸತೀಶ್ ಶೇಜವಾಡಕರ, ಭಾಗ್ಯಲಕ್ಷ್ಮಿ ಕಮ್ಮಾರ, ಸಂತೋಷ್ ಅರಕೇರಿ, ಬಸವರಾಜ ಅಮ್ಮಿನಭಾವಿ, ಯಮನೂರಪ್ಪ ಜಾಧವ, ಅರುಣ್ ಹುದಲಿ, ರಾಧಾಭಾಯಿ ಸಫಾರೆ, ಜಗದೀಶ ಬುಳ್ಳಾನವರ, ರಾಜು ಜರತಾರಘರ, ಪ್ರೀತಿ ಲದವಾ, ಅನೂಪ್ ಬಿಜವಾಡ, ಸುವರ್ಣ ಜಂಗಮಗೌಡರ, ರಾಜು ಕೊರ್ಯಾಣಮಠ, ಲಕ್ಷ್ಮೀಕಾಂತ ಘೋಡಕೆ, ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts