More

    ಬೀರೇಶ್ವರ  ಕ್ರೆಡಿಟ್ ಸೊಸೈಟಿ ಕಲಬುರಗಿ ಶಾಖೆ ಉದ್ಘಾಟನೆ ನಾಳೆ : ಪಾಟೀಲ್ ಕಲ್ಲಾ ಹೇಳಿಕೆ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಸಹಕಾರ ಕ್ಷೇತ್ರದಲ್ಲಿ ಹೆಸರು ಮಾಡಿರುವ ಯಕ್ಸಂಬಾ ಕೇಂದ್ರ ಕಚೇರಿ ಹೊಂದಿರುವ ಶ್ರೀ ಬೀರೇಶ್ವರ  ಕೋ-ಆಫ್ ಕ್ರೆಡಿಟ್ ಸೊಸೈಟಿಯ ಕಲಬುರಗಿ ಶಾಖೆಯ ಉದ್ಘಾಟನಾ ಸಮಾರಂಭವು ನಗರದ ಜೇವರ್ಗಿ ರಸ್ತೆಯ ಖಮಿತ್ಕರ ಬಿಸಿಸೆನ್ ಸೆಂಟರ್‌ನಲ್ಲಿ ಅ.೮ ರಂದು ಬೆಳಗ್ಗೆ ೧೦.೩೦ಕ್ಕೆ  ಜರುಗಲಿದೆ ಎಂದು ಜೇವರ್ಗಿ ಶಾಖೆಯ ಅಧ್ಯಕ್ಷ ಶಿವಣ್ಣಗೌಡ ಪಾಟೀಲ್ ತಿಳಿಸಿದರು.
    ಸೊಸೈಟಿಯ  ೧೭೮ನೇ ಶಾಖೆಯು ಕಲಬುರಗಿಯಲ್ಲಿ ಕಾರ್ಯಾರಂಭ ಮಾಡಲಿದೆ. ಕರ್ನಾಟಕ, ಮಹಾರಾಷ್ಟç ಮತ್ತು ಗೋವಾ ರಾಜ್ಯದಲ್ಲಿ ಶಾಖೆಗಳಿವೆ. ಕಿತ್ತೂರು ಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕ್ ಕಲ್ಯಾಣ ಕರ್ನಾಟಕಕ್ಕೆ ಬಂದAತೆ ಆಗಲಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಶ್ರೀಶೈಲ ಸಾರಂಗಮಠ ಮತ್ತು ಕಲಬುರಗಿಯ ಸುಲಫಲ ಮಠದ ಜಗದ್ಗುರು ಪೂಜ್ಯ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿ ಸಾನ್ನಿಧ್ಯದಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಶಾಸಕರಾದ ಅಲ್ಲಮಪ್ರಭು ಪಾಟೀಲï, ಅವಿನಾಶ ಜಾಧವ, ಶಶೀಲï ನಮೋಶಿ, ಬಿ.ಜಿ.ಪಾಟೀಲï ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿz್ದÁರೆ ಎಂದರು.
    ಸAಸ್ಥಾಪಕರಾಗಿರುವ ಚಿಕ್ಕೋಡಿ ಸಂಸದ  ಅಣ್ಣಾಸಾಹೇಬ ಜೊಲ್ಲೆ, ಸಹಕ ಸಂಸ್ಥಾಪಕಿಯಾಗಿರುವ ಮಾಜಿ ಸಚಿವೆ ಶಶಿಕಲಾ ಜೊಲ್ಲೆ  ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶರಣಬಸಪ್ಪ ಕ¯್ಲÁ, ಸಾಗರ ನಂದರಗಿ, ಬಾಪುರಾವ್ ಮೊದಲಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts