ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಮತದಾರರಿಗೆ ಜನಪ್ರತಿನಿಧಿಗಳ ಆಸೆ-ಆಮಿಷದ ಭರಾಟೆ ಜೋರಾಗಿದೆ. ಇಷ್ಟು ದಿನ ಬೆಳಗಾವಿಯಲ್ಲಿ ಕೇಳುತ್ತಿದ್ದ ಕುಕ್ಕರ ಸದ್ದು ಇದೀಗ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲೂ ಕೇಳುತ್ತಿದೆ.
ಹೌದು, ಇಷ್ಟು ದಿನ ಕುಕ್ಕರ್ ಅಂದರೆ ಸಾಕು ಬೆಳಗಾವಿಯ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೆನಪಾಗುತ್ತಿದ್ದರು. ಏಕೆಂದರೆ ಪ್ರತಿ ಬಾರಿ ಚುನಾವಣೆ ಬಂದಾಗ ಹೆಬ್ಬಾಳ್ಕರ್ ಅವರು ಕುಕ್ಕರ್ ಹಂಚುವುದು ಸಾಮಾನ್ಯ. ಇದೀಗ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರು ಹೆಬ್ಬಾಳ್ಕರ್ ಹಾದಿಯನ್ನು ಅನುಸರಿಸಿದ್ದಾರೆ. ಕುಕ್ಕರ್ ಹಂಚುವ ಮೂಲಕ ಬಿಟಿಎಂ ಲೇಔಟ್ ಮತದಾರರನ್ನು ಸೆಳೆಯುವ ಯತ್ನ ಮಾಡಿದ್ದಾರೆ.
ಒಂದು ಕಡೆ ಕಾಂಗ್ರೆಸ್ ನಾಯಕರು ಮತದಾರರಿಗೆ ಆಮಿಷ ನೀಡಿದ್ದಾರೆ ಎಂದು ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಹೊರಿಸಿ ದೂರು ನೀಡಿದ್ದಾರೆ. ಆದರೆ, ಅವರದೇ ಪಕ್ಷದ ಹಿರಿಯ ನಾಯಕ ಕುಕ್ಕರ್ ನೀಡುವ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ನ ಹಿರಿಯ ಮುಖಂಡ ರಾಮಲಿಂಗರೆಡ್ಡಿ ಅವರು ಸ್ವಕ್ಷೇತ್ರದಲ್ಲಿ ಮಹಿಳೆಯರಿಗೆ ಕುಕ್ಕರ್ ಹಂಚುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದ್ದು, ಇದು ಬಿಜೆಪಿಗೆ ಅಸ್ತ್ರವಾಗಿದೆ. (ದಿಗ್ವಿಜಯ ನ್ಯೂಸ್)
ವಿಶ್ವದ ಮೊದಲ ಹಾಗೂ ತನ್ನದೇಯಾದ ಕರೊನಾ ಮೂಗಿನ ಲಸಿಕೆ ಬಿಡುಗಡೆ ಮಾಡಿದ ಭಾರತ: 1 ಡೋಸ್ಗೆ 800 ರೂ.
ಕೇಂದ್ರದಿಂದ ಯಾವುದೇ ನೋಟಿಸ್ ಬಂದಿಲ್ಲ; ಪದೇ ಪದೇ ಊಹಾಪೋಹ ಯಾಕೆ ಹರಡುತ್ತಿದೆಯೋ ಗೊತ್ತಿಲ್ಲ!
ಸಮರ್ಥ ಅಭ್ಯರ್ಥಿಗಳಿದ್ದಾಗ ನಮ್ಮ ಕುಟುಂಬದಿಂದ ಯಾರನ್ನೂ ಸ್ಪರ್ಧೆಗೆ ಇಳಿಸುವುದಿಲ್ಲ; ಎಚ್ಡಿಕೆ ಸ್ಪಷ್ಟನೆ