More

    ಚಂದ್ರು ನಾಪತ್ತೆ ಆಗುವ ಮುನ್ನ ಆತನ ಮೊಬೈಲ್​​​​ಗೆ ಹತ್ತಾರು ಬಾರಿ ಫೋನ್​​​​​​​​ ಮಾಡಿದ್ಯಾರು.!?

    ದಾವಣಗೆರೆ: ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಗತಿ ಬೆಳಕಿಗೆ ಬಂದಿದೆ. ಚಂದ್ರಶೇಖರ್‌ ಮೊಬೈಲ್‌ಗೆ ನಿರಂತರವಾಗಿ ಒಂದೇ ನಂಬರ್​​​​​ನಿಂದ ಹತ್ತಕ್ಕೂ ಹೆಚ್ಚು ಬಾರಿ ಕರೆ ಹಾಗೂ ಮೆಸೇಜ್ ಬಂದಿದೆ. ಚಂದ್ರು ಕಾಣೆಯಾದ ದಿನ, ಅದೂ ರಾತ್ರಿ ಹತ್ತು ಗಂಟೆಯಿಂದ ಹೀಗೆ ಕರೆ ಮತ್ತು ಮೆಸೇಜ್​ ಬಂದಿರುವುದಕ್ಕೆ ಕಾರಣ ಏನಿರಬಹುದೆಂಬ ಪ್ರಶ್ನೆ ಎದುರಾಗಿದೆ. ಆ ಮೊಬೈಲ್​​​ ನಂಬರ್ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಚಂದ್ರು ನಾಪತ್ತೆಯಾದ ಐದನೇ ದಿನಕ್ಕೆ ತುಂಗಾ ಮೇಲ್ದಂಡೆ ಚಾನಲ್​​​​ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಕಾಲ್ ಡೀಟೇಲ್ಸ್ ರೆಕಾರ್ಡ್ (ಸಿಡಿಆರ್) ತೆಗೆಸಿ ನೋಡಿದಾಗ ಅಂದು ರಾತ್ರಿ 10 ಗಂಟೆಯಿಂದ ಒಂದೇ ನಂಬರ್​​​​​ನಿಂದ ಕರೆ‌ ಬಂದಿರುವುದು ಬಹಿರಂಗವಾಗಿದೆ.

    ರಾತ್ರಿ ಹತ್ತು ಗಂಟೆವರೆಗೂ ಗೌರಿ ಗದ್ದೆಯ ವಿನಯ್ ಗುರೂಜಿ ಆಶ್ರಮದಲ್ಲೇ ಚಂದ್ರು ಇದ್ದರು. ಚಿಕ್ಕಮಗಳೂರಿನ ಕೊಪ್ಪದ ವ್ಯಕ್ತಿಯ ಜೊತೆ ಸಂಭಾಷಣೆ ಮಾಡಿದ್ದರು ಎಂಬ ಮಾಹಿತಿಗಳು ಪೊಲೀಸರಿಗೆ ಸಿಕ್ಕಿವೆ. ಈಗ ಆ ಕರೆ ಮಾಡಿದವರು ಯಾರು, ಆತನಿಗೂ ಚಂದ್ರುಗೆ ಏನು ವ್ಯವಹಾರ ಎಂಬ ನಿಗೂಢ ಸಂಗತಿ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts