More

    ನೇಕಾರರ ಆರ್ಥಿಕ ಬಲವರ್ಧನೆಗೆ ಶ್ರಮಿಸುವೆ

    ಬಾಗಲಕೋಟೆ: ಸಹಕಾರಿ ರಂಗದ ಮೂಲಕ ನೇಕಾರರ ಆರ್ಥಿಕ ಬಲವರ್ಧನೆಗೆ ಶ್ರಮಿಸುತ್ತೇನೆ ಎಂದು ಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ಮುರಗೇಶ ಕಡ್ಲಿಮಟ್ಟಿ ಹೇಳಿದರು.

    ಜಿಲ್ಲೆಯ ಕಮತಗಿ ಪಟ್ಟಣದ ಸ್ವಾಮಿ ವಿವೇಕಾನಂದ ನಗರದಲ್ಲಿ ವಾರ್ಡ್ ನಂ-5ರ ಸಮಸ್ತ ನೇಕಾರರು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರ ಸಮುದಾಯಕ್ಕೆ ಸಿಗುವ ಎಲ್ಲ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸುವ ಪ್ರಯತ್ನ ಮಾಡುತ್ತೇನೆ ಎಂದರು.

    ನಿವೃತ್ತ ಶಿಕ್ಷಕ ಬಸವಂತಪ್ಪ ಬಿಜಾಪುರ ಮಾತನಾಡಿ, ಮುರಗೇಶ ಕಡ್ಲಿಮಟ್ಟಿ ಛಲದಂಕ ಮಲ್ಲ ಇದ್ದಂತೆ. ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ತಾವು ಅಂದುಕೊಂಡ ಗುರಿ ತಲಪುವರೆಗೂ ಬಿಡುವುದಿಲ್ಲ. ದೃಢವಾಗಿ ಹೆಜ್ಜೆ ಇಟ್ಟು ತಾವು ಕೈಗೊಂಡ ಕಾರ್ಯದಲ್ಲಿ ಯಶಸ್ವಿಯಾಗುತ್ತಾರೆ ಎಂದರು.

    ನೇಕಾರ ಸಮುದಾಯದ ಮುಖಂಡರಾದ ರೇವಣೆಪ್ಪ ಭಾಪ್ರಿ, ಡೀಕಪ್ಪ ಕ್ಯಾದಿಗ್ಗೇರಿ, ಗುರಪ್ಪ ಗಣಿ, ದಾನೇಶ ಕುಮಚಗಿ, ರಾಮಣ್ಣ ದಂಡಾವತಿ, ಬಸಪ್ಪ ಹಾದಿಮನಿ, ಗಣೇಶ ವಂದಗನೂರ, ಷಣ್ಮುಖ ವಂದಗನೂರ, ಮಂಜುನಾಥ ಭಾವಿ, ಬಸವರಾಜ ನಾಗಶೆಟ್ಟಿ, ರಾಘವೇಂದ್ರ ಗೊಂಡಬಾಳ, ಬಸವರಾಜ ದಂಡಾವತಿ ಸೇರಿದಂತೆ ಇತರರು ಇದ್ದರು. ರಾಮು ಕುಣಬೆಂಚಿ ನಿರೂಪಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts