More

    ಧಗಧಗಿಸುವ ಬಿಸಿಲಲ್ಲೂ ಪಾದಯಾತ್ರೆ

    ಬಾಗಲಕೋಟೆ: ಅಸಂಖ್ಯಾ ಭಕ್ತ ಸಮೂಹ ಹೊಂದಿರುವ ಆಂಧ್ರ ಪ್ರದೇಶದ ಶ್ರೀಶೈಲಂ (ಶ್ರೀಶೈಲ) ಶ್ರೀ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಉತ್ತರ ಕರ್ನಾಟಕದ ಅಪಾರ ಭಕ್ತರು ಪಾದಯಾತ್ರೆ ಕೈಗೊಂಡಿದ್ದಾರೆ.

    ಹಿಂದು ಕ್ಯಾಲೆಂಡರ್ ಅನುಸಾರ ಹೊಸ ವರ್ಷ ಆಚರಿಸುವ ಯುಗಾದಿ ಹಬ್ಬದಂದು ಶಿವನ ಮಹಾಕ್ಷೇತ್ರ ಶ್ರೀಶೈಲ ಜಾತ್ರೆಗೆ ಸಹಸ್ರಾರು ಭಕ್ತರು ಕಂಬಿಗಳೊಂದಿಗೆ ಭಕ್ತಿಯ ಹೆಜ್ಜೆ ಹಾಕಿದ್ದಾರೆ. ದೊಡ್ಡ ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ಭಕ್ತ ಸಮೂಹ ಮಲ್ಲಯ್ಯನ ದರುಶನಕ್ಕೆ ಬಾಗಲಕೋಟೆ ಮುಖಾಂತರ ಹಾಯ್ದು ಹೋಗುತ್ತಿದ್ದಾರೆ. ಕೋವಿಡ್ ಭೀತಿಗೆ ಹಿಂದೇಟು ಹಾಕದೆ ಶ್ರೀಶೈಲ ಮಲ್ಲಿಕಾರ್ಜುನ ಕಾಣಲು ಹೊರಟಿದ್ದು ಅಚ್ಚರಿ ಮೂಡಿಸಿತು. ಕೆಲವರು ಬಸವಣ್ಣ (ಎತ್ತುಗಳು), ಮರಗಾಲು ಕಟ್ಟಿಕೊಂಡು ಹೊರಟಿದ್ದು ಗಮನ ಸೆಳೆಯಿತು.

    ಕೋವಿಡ್ ಮುಕ್ತಿಗಾಗಿ ಹಾಗೂ ನಾಡಿನಲ್ಲಿ ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಜಾತಿ, ಧರ್ಮದ ಭೇದ-ಭಾವ ಇಲ್ಲದೆ ಮಲ್ಲಿಕಾರ್ಜುನನ ಸೇವೆಗೆ ಮುಂದಾಗಿದ್ದಾರೆ. ಮಹಾಶಿವರಾತ್ರಿ ಮುಗಿದ ನಂತರ ಹೋಳಿ ಹುಣ್ಣಿಮೆ ಎರಡು ದಿನ ಬಾಕಿ ಇರುವಾಗ ಪಾದಯಾತ್ರೆ ಆರಂಭಿಸಿ ಯುಗಾದಿ ಒಂದು ದಿನ ಬಾಕಿ ಇರುವಾಗಲೇ ಶ್ರೀಶೈಲ ತಲುಪುತ್ತಾರೆ. ಯುಗಾದಿ ಅಮಾವಾಸ್ಯೆ ಹಾಗೂ ಪಾಡ್ಯದಂದು ಜರುಗುವ ಜಾತ್ರೆ ಸಡಗರಕ್ಕೆ ಸಾಕ್ಷಿಯಾಗುತ್ತಾರೆ.

    ನಾವು ಹೊಂಟೇವ ಶ್ರೀಶೈಲ ನೋಡಲಾಕ
    ನಾವು ಹೊಂಟೇವ ಶ್ರೀಶೈಲ ನೋಡಲಾಕ.. ಸ್ವಾಮಿ ಮಲಯ್ಯನ ದರುಶನ ಮಾಡೋದಕ… ಗೀಯ ಗಾ… ಗಾಗೀಯ ಗಾ.. ಎಂದು ಉರಿವ ಬಿಸಿಲು ಲೆಕ್ಕಿಸದೆ ಗೀಗಿ ಪದ ಹಾಡುತ್ತ, ಶಿವ ಸ್ಮರಣೆ ಧ್ಯಾನಿಸುತ್ತ ಪಾದಯಾತ್ರೆ ನಡೆಸಿದ್ದಾರೆ. ಅಲ್ಲದೆ, ಮರಗಾಲು ಕಟ್ಟಿಕೊಂಡು, ದೀರ್ಘ ದಂಡ ನಮಸ್ಕಾರ ಹಾಕುತ್ತ, ತೇರು ಎಳೆಯುತ್ತ, ಎತ್ತು ಕರೆದುಕೊಂಡು, ಮಲ್ಲಯ್ಯನ ಕಂಬಿಗಳನ್ನು ಹಿಡಿದು ಸಾಗುವ ದೃಶ್ಯ ಭಕ್ತಿಯ ಭಾವನೆ ಹರಿಸುವಂತೆ ಮಾಡುತ್ತದೆ.

    ಪಾದಯಾತ್ರಿಗಳಿಗೆ ವಿವಿಧ ಸೇವೆ
    ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರ ಕರ್ನಾಟಕ ಗಡಿ ಭಾಗದ ಅಸಂಖ್ಯಾತ ಭಕ್ತರು ಪಾದಯಾತ್ರೆ ಮೂಲಕ ತೆರಳುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದ ವಲ್ಲಭಭಾಯಿ ಚೌಕ್, ಮುಚಖಂಡಿ ಕ್ರಾಸ್, ಚರಂತಿಮಠ, ಟೀಕಿನಮಠ ಮತ್ತು ನಗರದ ಆಸುಪಾಸಿನಲ್ಲಿರುವ ಕೃಷಿಕರು ತೋಟದ ಮನೆಯಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ, ವಿವಿಧ ಬಗೆಯ ಹಣ್ಣು ಹಂಪಲು, ಎಳನೀರು, ಪಾನಕ, ಮಜ್ಜಿಗೆ, ಗಂಜಿ ನೀಡಿ ಸೇವೆ ಮಾಡಲಾಗುತ್ತಿದೆ. ಅಲ್ಲದೆ, ನೋವು ನಿವಾರಣೆಯ ಔಷೋಧಪಚಾರ ಒದಗಿಸಲಾಗುತ್ತಿದೆ. ಇನ್ನೂ ಕೆಲವೆಡೆ ಪಾದಯಾತ್ರಿಗಳ ಅಂಗಗಳಿಗೆ ಒತ್ತಿ ಮಸಾಜ್ ಮೂಲಕ ನಗರದ ಸೇವಾಕರ್ತರು ಯಾತ್ರಿಗಳ ಸಹಾಯ ಮಾಡುತ್ತಿದ್ದಾರೆ.



    ಧಗಧಗಿಸುವ ಬಿಸಿಲಲ್ಲೂ ಪಾದಯಾತ್ರೆ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts