More

    ಅಪ್ಪನ ಅಸ್ಥಿ ಬಿಡಲು ಬಂದ ಮಗ ಸಾವು

    ಬಾಗಲಕೋಟೆ: ಬಾದಾಮಿ ತಾಲೂಕಿನ ಚೊಳಚಗುಡ್ಡ ಸೇತುವೆ ಬಳಿ ಮಲಪ್ರಭಾ ನದಿಯಲ್ಲಿ ಅಪ್ಪನ ಅಸ್ಥಿಯನ್ನು ಬಿಡಲು ಬಂದಿದ್ದ ಮಗ ಕಾಲುಜಾರಿ ಬಿದ್ದು ಬುಧವಾರ ಸಾವನ್ನಪ್ಪಿದ್ದಾನೆ.

    ಗದಗ ಜಿಲ್ಲೆ ಗಜೇಂದ್ರಗಡ ಪಟ್ಟಣದ ಮಹಾಂತೇಶ ಯಾದವ (45) ಮೃತ ವ್ಯಕ್ತಿ. 11 ದಿನಗಳ ಹಿಂದೆ ನಿಧನರಾದ ಮಹಾಂತೇಶ ಅವರ ತಂದೆ ನಿವೃತ್ತ ಶಿಕ್ಷಕ ಭೀಮಣ್ಣ ಅವರ ಅಸ್ಥಿಯನ್ನು ಮಲಪ್ರಭಾ ನದಿಯಲ್ಲಿ ಬಿಡಲು ಕುಟುಂಬದ ನಾಲ್ವರು ನದಿ ದಡಕ್ಕೆ ಬಂದಿದ್ದರು.

    ನದಿಯಲ್ಲಿ ಸ್ನಾನ ಮಾಡಿ ಮೇಲೆ ಬರುತ್ತಿದ್ದಾಗ ಮಹಾಂತೇಶ ಅವರು ಕಾಲು ಜಾರಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ. ಅವರ ಜತೆಗೆ ಬಂದಿದ್ದ ಇತರ ಮೂವರಿಗೂ ಈಜು ಬರುತ್ತಿರಲಿಲ್ಲ. ಇದರಿಂದ ನದಿ ಪಕ್ಕದ ಜಮೀನುಗಳಲ್ಲಿ ಇದ್ದ ರೈತರನ್ನು ಕರೆದರಾದರೂ ಅಷ್ಟರಲ್ಲಿ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಶೋಧ ಕಾರ್ಯ ನಡೆಸಿದರು. ಬಾದಾಮಿ ತಾಲೂಕಿನ ನಾಗರಾಳ ಬಳಿ ಶವ ಪತ್ತೆಯಾಗಿದೆ. ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಅಪ್ಪನ ಅಸ್ಥಿ ಬಿಡಲು ಬಂದಿದ್ದ ಮಗನನ್ನು ವಿಧಿ ಬರ ಸೆಳೆದುಕೊಂಡಿದೆ. ದುಃಖದಲ್ಲಿ ಇದ್ದವರಿಗೆ ಇದೀಗ ನಡೆದ ಘಟನೆ ಮತ್ತಷ್ಟು ಆಘಾತವನ್ನು ಉಂಟು ಮಾಡಿದೆ. ನಮಗೂ ಈಜು ಬಾರದ ಕಾರಣ ಆತನನ್ನು ರಕ್ಷಣೆ ಮಾಡಲು ಅಗಲಿಲ್ಲ.
    ಅರ್ಜುನ ಯಾದವ, ಮೃತ ಮಹಾಂತೇಶ ಸಂಬಂಧಿ





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts