More

    ಅಲ್ಲು ಅರ್ಜುನ್-ಅಟ್ಲೀ ಕಾಂಬೀನೇಷನ್​ನಲ್ಲಿ ಹೊಸ ಸಿನಿಮಾ?; ಸುಳಿವು ಕೊಟ್ಟ ‘ಪುಷ್ಪ 2’ ನಟ

    ಆಂಧ್ರಪ್ರದೇಶ: ರಾಷ್ಟ್ರ ಪ್ರಶಸ್ತಿ ವಿಜೇತ, ಟಾಲಿವುಡ್​ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ‘ಜವಾನ್’ ನಿರ್ದೇಶಕ ಅಟ್ಲೀ ಕುಮಾರ್​ ಕಾಂಬಿನೇಷ್​ನಲ್ಲಿ ಹೊಸ ಸಿನಿಮಾವೊಂದು ಮೂಡಲಿದೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸದ್ಯ ಈ ಸಂಗತಿ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಟ್ವೀಟ್​ ಮುಖೇನ ಅಲ್ಲು ಅರ್ಜನ್​ ಸುಳಿವು ನೀಡಿದ್ದಾರೆ.

    ಇದನ್ನೂ ಓದಿ: ಪತ್ನಿಯ ಕಾಟಕ್ಕೆ ಬೇಸತ್ತು ಸಹೋದರನಿಗೆ ಆಡಿಯೋ ಮೆಸೇಜ್ ಕಳುಹಿಸಿ ಸಾವಿಗೆ ಶರಣಾದ ಇಂಜಿನಿಯರ್​

    ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ತಮ್ಮ ಸಂಗೀತದ ಮೂಲಕ ಸದ್ದು ಮಾಡುವ ಅನಿರುದ್ಧ್ ರವಿಚಂದರ್, ಇತ್ತೀಚಿನ ಸ್ಟಾರ್​ ನಟರ ಸಿನಿಮಾಗಳ ಹಿಟ್​ ಹಾಡುಗಳಿಗೆ ಪ್ರಮುಖ ಕಾರಣರಾಗಿದ್ದಾರೆ. ತಮ್ಮ ಮುಂದಿನ ಸಿನಿಮಾಗಳಿಗೆ ಇವರ ಮ್ಯೂಸಿಕ್​ ಕಂಪೋಸಿಷನ್​ ಇರಬೇಕು ಎಂದು ಬಯಸುತ್ತಿರುವ ಖ್ಯಾತ ನಟ, ನಿರ್ದೇಶಕರ ಪೈಕಿ ಇದೀಗ ಅಲ್ಲು ಅರ್ಜುನ್​ ಮುಂಚೂಣಿಯಲ್ಲಿದ್ದಾರೆ ಎಂದೇ ಹೇಳಬಹುದು.

    ‘ಜವಾನ್’ ಚಿತ್ರಕ್ಕೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ ಅಲ್ಲು ಅರ್ಜುನ್, ಸಿನಿಮಾದ ಪ್ರಮುಖ ನಟರು ಸೇರಿದಂತೆ ಅನಿರುದ್ಧ್​ಗೂ ಅಭಿನಂದನೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅನಿರುದ್ಧ್, “ದನ್ಯವಾದ ಅಣ್ಣ” ಎಂದು ಹೇಳಿದ್ದಾರೆ. “ಸಾಧಾರಣ ಧನ್ಯವಾದ ಬೇಡ ನನಗೆ…ಅತ್ಯುತ್ತಮ ಹಾಡುಗಳು ಬೇಕು” ಎಂದು ಪರೋಕ್ಷವಾಗಿ ತಮ್ಮ ಮುಂದಿನ ಸಿನಿಮಾಗೆ ಸಾಂಗ್ ಕಂಪೋಸಿಷನ್​ ಮಾಡಬೇಕು ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಾಮದೇವರ ಬೆಟ್ಟದಿಂದ ಜಿಗಿದು ಪ್ರಾಣ ಕಳೆದುಕೊಳ್ಳಲು ಯತ್ನಿಸಿದ ಬೆಂಗಳೂರಿನ ಕ್ರೈಸ್ಟ್​ ಕಾಲೇಜಿನ ವಿದ್ಯಾರ್ಥಿನಿ

    ಇತ್ತೀಚೆಗಷ್ಟೇ ನಡೆದ ‘ಜವಾನ್’ ಪ್ರಚಾರದ ಸಂದರ್ಶನದಲ್ಲಿ ಭಾಗಿಯಾಗಿ, ಮಾತನಾಡಿದ ನಿರ್ದೇಶಕ ಅಟ್ಲೀ, “ನಾನು ಈಗಾಗಲೇ ಕಥೆಯನ್ನು ಅಲ್ಲು ಅರ್ಜುನ್​ ಅವರಿಗೆ ವಿವರಿಸಿದ್ದೇನೆ. ಶೀಘ್ರವೇ ಸಿಹಿ ಸುದ್ದಿ ನೀಡಲಿದ್ದೇನೆ” ಎಂದು ಹೇಳಿದ್ದರು. ಸದ್ಯ ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ, ಅಲ್ಲು ಅರ್ಜುನ್, ಅಟ್ಲೀ ಮತ್ತು ಅನಿರುದ್ಧ್ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ ಎಂಬ ನಿರೀಕ್ಷೆಗಳು ಮೂಡಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts