ನವದೆಹಲಿ: ದೆಹಲಿ ಪೊಲೀಸರ ವಿಶೇಷ ಘಟಕದ ಅಧಿಕಾರಿಗಳು ದೆಹಲಿಯ ಲಕ್ಷ್ಮೀನಗರದಿಂದ ಬಂಧಿಸಲ್ಪಟ್ಟ ಪಾಕಿಸ್ತಾನಿ ಉಗ್ರ ಮೊಹಮ್ಮದ್ ಅಸ್ರಫ್ನ ವಿಚಾರಣೆ ನಡೆಸುತ್ತಿದ್ದಾರೆ. 2009 ರಲ್ಲಿ ನಡೆದ ಜಮ್ಮು ಬಸ್ ನಿಲ್ದಾಣದಲ್ಲಿನ ಸ್ಫೋಟ, 2011 ರ ದೆಹಲಿ ಹೈಕೋರ್ಟ್ ಹೊರಗಿನ ಸ್ಫೋಟ ಮತ್ತಿತರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಅವನು ಶಾಮೀಲಾಗಿದ್ದರ ಬಗ್ಗೆ ಮಾಹಿತಿ ಲಭಿಸಿದೆ.
2009ನೇ ಇಸವಿಯಲ್ಲಿ ಜಮ್ಮು ಬಸ್ ನಿಲ್ದಾಣದಲ್ಲಿ ನಡೆದಿದ್ದ ಬಾಂಬ್ ಸ್ಫೋಟವನ್ನು ಕೈಗೊಂಡಿದ್ದ ಉಗ್ರ ಅಸ್ರಫ್. ನಾಲ್ಕು ನಾಗರೀಕರು ಸಾವಪ್ಪಿದ್ದ ಈ ದುಷ್ಕೃತ್ಯವನ್ನು ಐಎಸ್ಐ ಅಧಿಕಾರಿ ಎನ್ನಲಾದ ನಾಸಿರ್ನ ನಿರ್ದೇಶನದ ಮೇರೆಗೆ ಈ ಎಸಗಲಾಗಿತ್ತು ಎನ್ನಲಾಗಿದೆ.
2011ರ ದೆಹಲಿ ಹೈಕೋರ್ಟ್ ಬ್ಲಾಸ್ಟ್ಗಾಗಿ ಹಲವು ಕೆಲಸಗಳನ್ನು ಮಾಡಿದ್ದಾಗಿಯೂ ಅಸ್ರಫ್ ಹೇಳಿಕೊಂಡಿದ್ದಾನೆ. ಆ ಕೃತ್ಯ ಎಸಗಲು ಇಬ್ಬರು ಪಾಕಿಸ್ತಾನೀಯರು ಬಂದಿದ್ದರು. ಅವರಲ್ಲಿ ಒಬ್ಬ ಘುಲಾಮ್ ಸರ್ವಾರ್ ಎಂಬುವ. ಸ್ಫೋಟ ಕಾರ್ಯಾಚರಣೆಯ ಮುನ್ನ ತಾನು ಪೊಲೀಸ್ ಹೆಡ್ಕ್ವಾರ್ಟರ್ಸ್ ಸೇರಿದಂತೆ ಇತರ 10 ಸರ್ಕಾರಿ ಕಾರ್ಯಾಲಯಗಳ ಸ್ಥಳಸಮೀಕ್ಷೆ ನಡೆಸಿ ಐಎಸ್ಐಗೆ ಮಾಹಿತಿ ನೀಡಿದ್ದೆ ತಿಳಿಸಿರುವ ಅಶ್ರಫ್, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಐವರು ಸೇನಾ ಸಿಬ್ಬಂದಿಯ ಹತ್ಯೆ ಪ್ರಕರಣದಲ್ಲೂ ಶಾಮೀಲಾಗಿದ್ದುದಾಗಿ ಹೇಳಿಕೊಂಡಿದ್ದಾನೆ.
ನಾಸಿರ್ನ ಸೂಚನೆಗಳ ಮೇರೆಗೆ ತಾನು ಜಮ್ಮು ಮತ್ತು ಕಾಶ್ಮೀರಕ್ಕೆ ಬಹು ಬಾರಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲು ಹೋಗಿದ್ದಾಗಿ ಮತ್ತು ಐಎಸ್ಐ ಅಧಿಕಾರಿಗಳೊಂದಿಗೆ ಯಾವಾಗಲೂ ಈ-ಮೇಲ್ ಮೂಲಕ ವ್ಯವಹರಿಸುತ್ತಿದ್ದುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ. ಬಂಧಿತ ಉಗ್ರ ಅಸ್ರಫ್ನ ಮಾತುಗಳ ಸತ್ಯಾಸತ್ಯತೆ ಮತ್ತು ಇನ್ನಷ್ಟು ಮಾಹಿತಿಗಾಗಿ ಪೊಲೀಸರು ವಿಚಾರಣೆ ಮತ್ತು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಹಲವು ಮುಖಗಳನ್ನು ಹೊಂದಿದ್ದ ಪಾಕಿಸ್ತಾನಿ ಉಗ್ರ… ಭಾರತೀಯ ಮಹಿಳೇನ ಮದುವೆ ಆಗಿದ್ದ!
ದೆಹಲಿಯಲ್ಲಿ ವಿದ್ಯುತ್ ಕೊರತೆ ಇಲ್ಲ! ವಿದ್ಯುತ್ ಪೂರೈಕೆಯ ಫ್ಯಾಕ್ಟ್ಶೀಟ್ ಪ್ರಕಟಿಸಿದ ಕೇಂದ್ರ ಸರ್ಕಾರ