More

    ಹೆದರಿಸಲು ಬಂದ್ರು ಅನುಶ್ರೀ; ನಾಲ್ಕು ವರ್ಷಗಳ ನಂತರ ನಟನೆಗೆ..

    ಬೆಂಗಳೂರು: ಅನುಶ್ರೀ ನಟನೆಯಿಂದ ದೂರ ಉಳಿದು ನಾಲ್ಕು ವರ್ಷವೇ ಆಗಿತ್ತು. 2017ರಲ್ಲಿ ಬಿಡುಗಡೆಯಾದ ‘ಉಪು್ಪ ಹುಳಿ ಖಾರ’ ಚಿತ್ರವೇ ಕೊನೆ. ಆ ನಂತರ ಅನುಶ್ರೀ ನಿರೂಪಣೆಯಲ್ಲೇ ಬಿಜಿಯಾಗಿದ್ದರು. ಈಗ ಅವರು ಚಿತ್ರವೊಂದರಲ್ಲಿ ನಟಿಸುವುದಕ್ಕೆ ಮತ್ತೆ ತಯಾರಾಗಿ ನಿಂತಿದ್ದಾರೆ.

    ಅಂದಹಾಗೆ, ಅನುಶ್ರೀ ನಟಿಸುತ್ತಿರುವ ಹೊಸ ಚಿತ್ರದ ಹೆಸರು ಇನ್ನೂ ಘೋಷಣೆ ಯಾಗಿಲ್ಲ. ಆದರೆ, ಸೋಮವಾರ ಚಿತ್ರದ ಮುಹೂರ್ತವಾಗಿದೆ. ‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿರುವ ಲೋಹಿತ್, ಈ ಚಿತ್ರವನ್ನು ಪಾರ್ಥಿಬನ್ ಮತ್ತು ಪುನೀತ್ ಜತೆಗೆ ಸೇರಿ ನಿರ್ವಿುಸುತ್ತಿ ದ್ದಾರೆ. ಆ ಎರಡೂ ಚಿತ್ರಗಳಿಗೆ ಲೋಹಿತ್​ಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಪ್ರಭಾಕರ್, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

    ಇದೊಂದು ಹಾರರ್ ಚಿತ್ರವಂತೆ. ಹಾಗಂತ ಇದೊಂದು ಸೇಡಿನ ಕಥೆಯೋ ಅಥವಾ ಒಂಟಿ ಮನೆಯಲ್ಲಿ ನಡೆಯುವ ದೆವ್ವದ ಚೇಷ್ಟೆಯ ಕಥೆಯಲ್ಲ ಎಂದು ಸ್ಪಷ್ಟಪಡಿಸುತ್ತಾರೆ ಲೋಹಿತ್. ‘ದೈವಿಕ ಶಕ್ತಿಗೆ ವಿರುದ್ಧವಾಗಿ ದುಷ್ಟಶಕ್ತಿಗಳನ್ನು ಆರಾಧಿಸುವ ಜನರೂ ಇದ್ದಾರೆ. ಅಂತಹ ಜನಸಮೂಹದ ಕುರಿತಾದ ಕಥೆ ಇದು. ಇದೊಂದು ಹೊಸತನದ ಕಥೆಯಾಗಿದ್ದು, ಒಂದಿಷ್ಟು ನೈಜ ಘಟನೆಗಳೂ ಇರುತ್ತವೆ’ ಎನ್ನುತ್ತಾರೆ ಲೋಹಿತ್.

    ಈ ಚಿತ್ರದ ಕುರಿತು ಮಾತನಾಡಿರುವ ಅನುಶ್ರೀ, ‘ಬಹಳ ಸಮಯದ ನಂತರ ಒಪ್ಪಿಕೊಂಡ ಸಿನಿಮಾ ಇದು. ಸಿನಿಮಾ ಮಾಡಬೇಕು ಅಥವಾ ಮಾಡಬಾರದು ಅಂತೇನಿಲ್ಲ. ಆದರೆ, ಯಾವುದೇ ಕಥೆ ಮನಸ್ಸಿಗೆ ಹತ್ತಿರವಾಗಿರಲಿಲ್ಲ. ಈ ಪಾತ್ರ ಮತ್ತು ಕಥೆ ಎರಡೂ ಬಹಳ ಇಷ್ಟವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ನನಗೆ ಹಾರರ್ ಚಿತ್ರಗಳೆಂದರೆ ಬಹಳ ಇಷ್ಟ. ಲೋಹಿತ್ ನಿರ್ದೇಶಿಸಿದ್ದ ‘ಮಮ್ಮಿ’ ಬಹಳ ಇಷ್ಟವಾಗಿತ್ತು. ಹಾರರ್ ಚಿತ್ರವನ್ನು ಕ್ಲಾಸ್ ಆಗಿ ನಿರೂಪಿಸಿದ್ದರು. ಅವರ ನೇತೃತ್ವದಲ್ಲಿ ತಯಾರಾಗುತ್ತಿರುವ ಚಿತ್ರ ಎಂದಾಗ ಒಪ್ಪಿಕೊಂಡೆ. ಅವರು ವಿವರಿಸಿದ ಪಾತ್ರ, ಪರಿಸರ ಖುಷಿ ಕೊಟ್ಟಿತು’ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.

    ಜ. 31ರವರೆಗೂ ಶಾಲೆಗಳಿಗೆ ರಜೆ; 1ರಿಂದ 9ರ ವರೆಗಿನ ತರಗತಿಗಳಿಗಷ್ಟೇ ಅನ್ವಯ: ಬಿಎಂಸಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts