ವಿಜಯವಾಡ: ಆಂಧ್ರ ಪ್ರದೇಶದ ಸರ್ವತೋಮುಖ ಬೆಳವಣಿಗೆಗೆ ಪಣತೊಟ್ಟಿರುವ ಮುಖ್ಯಮಂತ್ರಿ ವೈ. ಎಸ್. ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ಸಿಪಿ ಸರ್ಕಾರ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.
ಜಗನ್ನಣ ಥೋಡು ಯೋಜನೆಯನ್ನು ಸಿಎಂ ಜಗನ್ ಇಂದು ಉದ್ಘಾಟನೆ ಮಾಡಿದ್ದು, ಈ ಯೋಜೆನಯ ಅಡಿಯಲ್ಲಿ ರಾಜ್ಯದ ಎಲ್ಲ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳಿಗೆ ನೆರವಿನ ಹಸ್ತವನ್ನು ಸರ್ಕಾರ ನೀಡಲಿದೆ.
1 ಸಾವಿರ ಕೋಟಿ ರೂ. ಯೋಜನೆ ಇದಾಗಿದ್ದು, ಯಾವುದೇ ಬಡ್ಡಿಯಿಲ್ಲದೆ ಸುಮಾರು 10 ಲಕ್ಷ ಜನರಿಗೆ ಯೋಜನೆಯಡಿ ತಲಾ 10 ಸಾವಿರ ರೂ. ಸಾಲ ನೀಡಲಾಗುತ್ತದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಿಎಂ ಜಗನ್ ನೇರವಾಗಿ ಹಣವನ್ನು ಜಮಾ ಮಾಡುವ ಮೂಲಕ ಯೋಜನೆ ಉದ್ಘಾಟಿಸಿದ್ದಾರೆ.
ಇದನ್ನೂ ಓದಿ: 25 ವರ್ಷ ಹಿಂದೆ ಕೊಲೆ ಮಾಡಿದ್ದ ವ್ಯಕ್ತಿ ಈಗ ಸಿಕ್ಕಿಬಿದ್ದ; ಕೇಸ್ ಸಾಲ್ವ್ ಆದ ಬಗೆಯೇ ರೋಚಕ
ಅಧಿಕಾರಕ್ಕೂ ಮುನ್ನ ಜಗನ್ ಮಾಡಿದ್ದ 3,648 ಕಿಮೀ ವರೆಗಿನ ಪ್ರಜಾ ಸಂಕಲ್ಪ ಯಾತ್ರಾ ಸಮಯದಲ್ಲಿ ಸಣ್ಣ ಮತ್ತು ಮಧ್ಯಮ ವ್ಯಾಪಾರಿಗಳ ಸ್ಥಿತಿಯನ್ನು ನೋಡಿದ್ದ ಜಗನ್ ಇದೀಗ ಯೋಜನೆಗೆ ಒಂದು ರೂಪ ಕೊಟ್ಟಿದ್ದಾರೆ. ಬ್ಯಾಂಕ್ಗಳು ಸಾಲ ನೀಡಲಿದ್ದು, ಸರ್ಕಾರವೇ ಬಡ್ಡಿಯನ್ನು ಬರಿಸಲಿದೆ.
ಯೋಜನೆಗೆ ಪ್ರತ್ಯೇಕವಾಗಿ ವೆಬ್ಸೈಟ್ ಅನ್ನು ತೆರೆಯಲಾಗಿದ್ದು, ಇದರ ಮೂಲಕ ಬ್ಯಾಂಕ್ಗಳೊಂದಿಗೆ ಸಹಕಾರ ಸಾಧಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಯಾವುದೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳಲು ವೆಬ್ಸೈಟ್ ಸಹ ಪೂರಕವಾಗಿದ್ದು, ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮಾ ಆಗಲಿದ್ದು, ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ.
ಇನ್ನು ಫಲಾನುಭವಿಗಳಿಗೆ ಕ್ಯೂಆರ್ ಕೋಡ್ ಒಳಗೊಂದ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಅದರ ಮೇಲೆ ನಿಗಾವನ್ನು ಇಡಲಾಗುತ್ತದೆ. ತರಕಾರಿ, ಹಣ್ಣು ಮಾರಾಟಗಾರರು, ಸಣ್ಣ ಅಂಗಡಿ ಹೊಂದಿರುವವರು ಸೇರಿದಂತೆ ಅನೇಕರು ಯೋಜನೆಯ ಲಾಭ ಪಡೆಯಲು ಅರ್ಜಿ ಅಲ್ಲಿಸಬಹುದಾಗಿದೆ. (ಏಜೆನ್ಸೀಸ್)
ಪಾಕ್ನಲ್ಲಿ ಇನ್ಮುಂದೆ ರೇಪ್ ಹೆಸ್ರು ಕೇಳಿದ್ರೆ ಬೆಚ್ಚಿಬೀಳಲಿದ್ದಾರೆ ಕಾಮುಕರು- ಇದೆಂಥ ಶಿಕ್ಷೆ ಗೊತ್ತಾ?