ಜೀ ಕನ್ನಡ ವಾಹಿನಿಯು ತನ್ನ ಜನಪ್ರಿಯ ಕಾರ್ಯಕ್ರಮಗಳನ್ನು ಮರುಪ್ರಸಾರ ಮಾಡುತ್ತಿರುವುದು ಗೊತ್ತಿರುವ ವಿಷಯವೇ. ಅದರಲ್ಲೂ ‘ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮದ ಮರುಪ್ರಸಾರ ಈಗಾಗಲೇ ಕಳೆದ ವಾರದಿಂದ ಪ್ರಾರಂಭವಾಗಿದೆ. ಕಳೆದ ವಾರ ದರ್ಶನ್ ಮತ್ತು ಜಗ್ಗೇಶ್ ಅವರ ಎಪಿಸೋಡ್ಗಳನ್ನು ಪ್ರಸಾರ ಮಾಡಲಾಗಿತ್ತು. ಈ ವಾರ ಅಂಬರೀಶ್ ಮತ್ತು ಸುದೀಪ್ ಅವರ ಕಂತುಗಳು ಪ್ರಸಾರವಾಗಲಿದೆ.
ಹೌದು, ಇದೇ ಏಪ್ರಿಲ್ 18ರ ಶನಿವಾರ ಮಧ್ಯಾಹ್ನ ಒಂದು ಗಂಟೆಗೆ ‘ರೆಬಲ್ ಸ್ಟಾರ್’ ಅಂಬರೀಶ್ ಅವರ ಎಪಿಸೋಡ್ ಪ್ರಸಾರವಾದರೆ, ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ‘ಕಿಚ್ಚ’ ಸುದೀಪ್ ಅವರ ಎಪಿಸೋಡ್ ಪ್ರಸಾರವಾಗಲಿದೆ. ಈ ಎರಡೂ ಎಪಿಸೋಡ್ಗಳು ಮೊದಲ ಬಾರಿಗೆ ಪ್ರಸಾರವಾದಾಗ, ಸಾಕಷ್ಟು ಮೆಚ್ಚುಗೆ ಪಡೆದಿದ್ದವು. ಅಂಬರೀಶ್ ಹಾಗೂ ಸುದೀಪ್ ಅವರು ನಡೆದು ಬಂದ ಹಾದಿಯನ್ನು ತಿಳಿದುಕೊಳ್ಳುವುದಕ್ಕೆ ಮತ್ತೊಮ್ಮೆ ಈ ಎಪಿಸೋಡುಗಳನ್ನು ನೋಡಬಹುದು.
ಈಗಾಗಲೇ ಜೀ ಕನ್ನಡದಲ್ಲಿ ‘ಸರಿಗಮಪ – ಸೀಸನ್ 15’, ‘ಡ್ರಾಮಾ – ಸೀಸನ್ 1’, ‘ಕಾಮಿಡಿ ಕಿಲಾಡಿಗಳು – ಸೀಸನ್ 1’, ‘ಚೋಟಾ ಚಾಂಪಿಯನ್ – ಸೀಸನ್ 1’ ಮುಂತಾದ ಜನಪ್ರಿಯ ರಿಯಾಲಿಟಿ ಶೋಗಳಲ್ಲದೆ, ಕೆಲವು ಜನಪ್ರಿಯ ಧಾರಾವಾಹಿಗಳ ಮರುಪ್ರಸಾರ ಪ್ರಾರಂಭವಾಗಿದೆ. ಈ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಂಡವರು ಮತ್ತೊಮ್ಮೆ ನೋಡಬಹುದು.
‘ಪುಷ್ಪ’ ಚಿತದಲ್ಲಿ ನಟಿಸಲು ಧನಂಜಯ್ಗೆ ಆಫರ್ … ಮಾತುಕತೆ ನಂತರ ಮುಂದಿನ ತೀರ್ಮಾನ ಎಂದ ಡಾಲಿ