More

    ಮತ್ತೆ ತೆಲುಗಿಗೆ ಆಲಿಯಾ!; ಜೂನಿಯರ್ ಎನ್​ಟಿಆರ್ ಸಿನಿಮಾಗೆ ನಾಯಕಿ

    ‘ಆರ್​ಆರ್​ಆರ್’ ಚಿತ್ರದಲ್ಲಿ ರಾಮ್ರಣ್ ತೇಜಗೆ ನಾಯಕಿಯಾಗಿ ಅಭಿನಯಿಸಿದ್ದಾರೆ ಆಲಿಯಾ ಭಟ್. ಅದು ಬಿಡುಗಡೆಯಾಗುತ್ತಿದ್ದಂತೆಯೇ, ಹೊಸ ಚಿತ್ರವೊಂದರಲ್ಲಿ ಜೂ. ಎನ್​ಟಿಆರ್​ಗೆ ಅವರು ನಾಯಕಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದ್ದೇ ಇತ್ತು. ಈಗ ಆ ಸುದ್ದಿ ಪಕ್ಕಾ ಆಗಿದ್ದು, ಫೆ.7ರಂದು ಚಿತ್ರ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

    ಐದೂವರೆ ವರ್ಷಗಳ ಹಿಂದೆ ‘ಜನತಾ ಗ್ಯಾರೇಜ್’ ಬಿಡುಗಡೆಯಾಗುತ್ತಿದ್ದಂತೆಯೇ, ಜೂ. ಎನ್​ಟಿಆರ್ ಅಭಿನಯದಲ್ಲಿ, ಕೊರಟಾಲ ಶಿವ ನಿರ್ದೇಶನದಲ್ಲಿ ಇನ್ನೊಂದು ಚಿತ್ರ ಮೂಡಿಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ತಾರಕ್ ಆ ಕಡೆ ‘ಆರ್​ಆರ್​ಆರ್’, ‘ಜೈ ಲವ ಕುಶ’ ಮತ್ತು ‘ಅರವಿಂದ ಸಮೇತ ವೀರ ರಾಘವ’ ಚಿತ್ರಗಳಲ್ಲಿ ತೊಡಗಿಸಿಕೊಂಡರೆ, ಈ ಕಡೆ ‘ಭರತ್ ಅನೇ ನೇನು’ ಮತ್ತು ‘ಆಚಾರ್ಯ’ ಚಿತ್ರಗಳಲ್ಲಿ ಕೊರಟಾಲ ಶಿವ ಬಿಜಿಯಾದರು. ಒಪ್ಪಿಕೊಂಡಿದ್ದ ಕೆಲಸಗಳನ್ನೆಲ್ಲ ಇಬ್ಬರೂ ಮುಗಿಸಿದ್ದು, ಹೊಸ ಚಿತ್ರವೊಂದಕ್ಕೆ ಕೈಜೋಡಿಸಿದ್ದಾರೆ.

    ‘ಆರ್​ಆರ್​ಆರ್’ ಚಿತ್ರದ ಸಂದರ್ಭದಲ್ಲೇ, ಈ ಹೊಸ ಚಿತ್ರದ ಕುರಿತು ಮಾತನಾಡಿದ್ದರಂತೆ ಜೂ. ಎನ್​ಟಿಆರ್. ಕಥೆ ಮತ್ತು ಪಾತ್ರ ಚೆನ್ನಾಗಿದ್ದು, ಚಿತ್ರದಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ ಎಂದಿದ್ದರಂತೆ. ಇದಕ್ಕೆ ಆಲಿಯಾ ಸಮ್ಮತಿ ಸೂಚಿಸಿದ್ದು, ಚಿತ್ರದ ನಾಯಕಿಯಾಗಿ ಚಿತ್ರತಂಡಕ್ಕೆ ಸೇರ್ಪಡೆ ಆಗಿದ್ದಾರಂತೆ. ಚಿತ್ರ ಸದ್ಯದಲ್ಲೇ ಪ್ರಾರಂಭವಾದರೂ, ಚಿತ್ರೀಕರಣ ಮಾರ್ಚ್​ನಿಂದ ಪ್ರಾರಂಭವಾಗಲಿದೆ.

    ಅಮ್ಮನೊಂದಿಗೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದವ ಬಾವಿಯಲ್ಲಿ ಶವವಾಗಿ ಪತ್ತೆ!

    ಮನೆಯಲ್ಲಿ ಸಿಲಿಂಡರ್ ಸ್ಫೋಟ: ಸಹೋದರರಿಬ್ಬರ ಸಾವು, ಇನ್ನು ಮೂವರ ಸ್ಥಿತಿ ಚಿಂತಾಜನಕ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts