More

    ರಾಜಮೌಳಿಯವರ ಆರ್​ಆರ್​ಆರ್​ ಚಿತ್ರದ ಸಂಭಾವನೆಯನ್ನು ಅಜಯ್​ ದೇವಗನ್ ಬೇಡವೆನ್ನಲು ಈಗ ಚಿತ್ರ ಕಾರಣ!

    ಹೈದರಾಬಾದ್​: ಟಾಲಿವುಡ್​ ಸ್ಟಾರ್​ ಡೈರೆಕ್ಟರ್​ ಎಸ್​.ಎಸ್​.ರಾಜಮೌಳಿ ಅವರ ಬಹುತಾರಾಗಣದ ಬಹುನಿರೀಕ್ಷಿತ ಆರ್​ಆರ್​ಆರ್​ ಚಿತ್ರದಲ್ಲಿ ಬಾಲಿವುಡ್​ ನಟ ಅಜಯ್​ ದೇವಗನ್​ ಅವರು ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷವೆಂದರೆ ಚಿತ್ರದಲ್ಲಿ ನಟಿಸಲು ಅಜಯ್​​ ಅವರು ಸಂಭಾವನೆಯನ್ನೇ ಪಡೆದಿಲ್ಲವಂತೆ.

    ನಿರ್ಮಾಪಕ ಡಿವಿವಿ ದಾನಯ್ಯಾ ಅವರು ಪೂರ್ತಿ ಸಂಭಾವನೆಯನ್ನು ನೀಡಲು ಮುಂದಾಗಿದ್ದರಂತೆ, ಆದರೆ ಅದನ್ನು ತೆಗೆದುಕೊಳ್ಳಲು ಅಜಯ್ ತಿರಸ್ಕರಿಸಿದ್ದಾರೆ. ಅದಕ್ಕೆ ಕಾರಣ ರಾಜಮೌಳಿ ಮತ್ತು ಅಜಯ್​ ನಡುವಿನ ಸ್ನೇಹ ಎಂದು ಮೂಲಗಳು ತಿಳಿಸಿವೆ.​

    2012ರಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಂಡು ಸಿನಿ ರಸಿಕರ ಮನಗೆದ್ದ “ಈಗ” ಚಿತ್ರದಿಂದ ರಾಜಮೌಳಿ ಮತ್ತು ಅಜಯ್ ನಡುವೆ ಸ್ನೇಹ ಚಿಗುರೊಡೆಯಿತಂತೆ.​ ಈಗ ಚಿತ್ರದ ಹಿಂದಿ ಅವತರಣಿಕೆಯ “ಮಕ್ಕಿ”ಗೆ ಅಜಯ್​ ಧ್ವನಿ ನೀಡಿದ್ದರು. ಅಲ್ಲಿಂದ ಅವರಿಬ್ಬರ ಸಂಬಂಧ ಇಂದು ಸಂಭಾವನೆ ತಿರಸ್ಕರಿಸುವ ಮಟ್ಟಕ್ಕೆ ಬೆಳೆದಿದೆ.

    ಆರ್​ಆರ್​ಆರ್​ ಚಿತ್ರದ ಸ್ಟಾರ್​ ನಟರಾದ ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್​ ನೀಡಿರುವ ಸಂಭಾವನೆಯಷ್ಟೇ ಅಜಯ್​ಗೆ ನೀಡಲು ನಿರ್ಮಾಪಕರು ಮುಂದಾಗಿದ್ದರು. ಯಾವಾಗ ಇದನ್ನು ಅಜಯ್​ ನಿರಾಕರಿಸಿದರೂ, ಸಿನಿ ಮಾರುಕಟ್ಟೆಯಲ್ಲಿ ಇರುವ ಮೌಲ್ಯವನ್ನು ನೀಡಲು ಮುಂದಾಗಿದ್ದರು. ಅದನ್ನೂ ನಿರಾಕರಿಸಿರುವ ಅಜಯ್​, ರಾಜಮೌಳಿ ಸ್ನೇಹಕ್ಕಾಗಿ ಮಾತ್ರ ಈ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

    ಜ್ಯೂನಿಯರ್​ ಎನ್​ಟಿಆರ್​ ಮತ್ತು ರಾಮ್​ ಚರಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಆರ್​ಆರ್​ಆರ್​ ಚಿತ್ರವು ಟಾಲಿವುಡ್​ನ ಬಹುನಿರೀಕ್ಷಿತ ಸಿನಿಮ ಆಗಿದ್ದು, ಮುಂದಿನ ವರ್ಷ ಜನವರಿಯಲ್ಲಿ ಚಿತ್ರ ತೆರೆಗೆ ಬರಲಿದೆ.​ ಇಂದೊಂದು ಐತಿಹಾಸಿಕ ಸಿನಿಮಾ ಎನ್ನಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts