ಚಾಮರಾಜನಗರ: ಶನಿಮಹಾತ್ಮ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಎಂಟ್ರಿ ಕೊಟ್ಟು ಗೋಲಕ ಕದ್ದ ಕಳ್ಳ ಸಿಸಿಟಿವಿಯ ವಕ್ರದೃಷ್ಟಿ ಬಿದ್ದು ಜೈಲು ಪಾಲಾಗಿದ್ದಾನೆ.
ನಗರದ ಉಪ್ಪಾರ ಬಡಾವಣೆಯ ನಿವಾಸಿ ಮೋಹನ್ಕುಮಾರ್(40) ಎಂಬಾತನ ಕಳ್ಳ ಕೆಲಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ ಶ್ರೀಚಾಮರಾಜೇಶ್ವರ ದೇವಸ್ಥಾನದ ಹಿಂಭಾಗ ಇರುವ ಶನಿ ದೇವರ ದೇವಸ್ಥಾನಕ್ಕೆ ಸೆ.8ರಂದು ರಾತ್ರಿ ಬಂದಿದ್ದಾನೆ. ಕಟಿಂಗ್ ಪ್ಲೇಯರ್ ಬಳಸಿ ಕಂಬಿ ಕಿತ್ತು ಗೋಲಕ ಎಗರಿಸಿದ್ದಾನೆ.
ದೇವಸ್ಥಾನದ ಆಡಳಿತ ಮಂಡಳಿ ಬೆಳಗ್ಗೆ ಕಳ್ಳತನ ನಡೆದಿರುವುದು ಗೊತ್ತಾಗಿ ಸಿಸಿಟಿವಿ ಪರಿಶೀಲಸಿದಾಗ ಮೋಹನ್ ಕುಮಾರ್ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಸೆ.9ರಂದು ಪಟ್ಟಣ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿದ್ದಾರೆ.
ಮೋಹನ್ ಕುಮಾರ್ ಕದ್ದಿದ್ದ ಗೋಲಕದ ಬೀಗ ಹೊಡೆಯಲಾಗದೆ ರಸ್ತೆಯಲ್ಲೇ ಎಸೆದು ಹೋಗಿದ್ದ. ಈ ಮಾಹಿತಿ ಪಡೆದ ಪೊಲೀಸರು ಗೋಲಕ ಪತ್ತೆ ಹಚ್ಚಿದ್ದಾರೆ. ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ವೇಳೆ ಮೋಹನ್ ಕುಮಾರ್ ಲಾಕ್ ಡೌನ್ ನಿಂದಾಗಿ ಜೇಬಲ್ಲಿ ಹಣವಿಲ್ಲದೆ ದೇವಸ್ಥಾನದ ಗೋಲಕ ಕದ್ದಿದ್ದೇನೆ ಎಂದು ಹೇಳಿರುವುದಾಗಿ ತಿಳಿದುಬಂದಿದೆ.
ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ
ಆತ್ಮ ಅತೃಪ್ತಿಗೊಂಡು ಭಂಗವಾಗಿ ಕಾಡುತ್ತವೆ, ಸಾವುಗಳು ಹೆಚ್ಚುತ್ತವೆ: ಭವಿಷ್ಯ ನುಡಿದ ಕೋಡಿಶ್ರೀ