More

    ಒಂದೇ ಶಾಲೆಗೆ ಶಿಕ್ಷಕರಾಗಿದ್ದ ಅಣ್ಣ-ತಮ್ಮ ಇಬ್ಬರೂ ಕರೊನಾಗೆ ಬಲಿ! ಮನಕಲಕುತ್ತೆ ಕುಟುಂಬಸ್ಥರ ಆಕ್ರಂದನ

    ಬೆಳಗಾವಿ: ಮಹಾಮಾರಿ ಕರೊನಾ ಶಿಕ್ಷಕರನ್ನೂ ಬೆಂಬಿಡದೆ ಕಾಡುತ್ತಿದ್ದು, ರಾಜ್ಯದಲ್ಲಿ ನೂರಾರು ಶಿಕ್ಷಕರನ್ನು ಬಲಿ ಪಡೆದಿದೆ. ಸಾವಿನ ಸರಣಿ ಮುಂದುವರಿದಿದ್ದು, ಬೆಳಗಾವಿಯಲ್ಲೂ ಒಂದೇ ಮನೆಯ ಶಿಕ್ಷಕ ಸಹೋದರರಿಬ್ಬರು ಕರೊನಾದಿಂದ ಮೃತಪಟ್ಟಿದ್ದಾರೆ.

    ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೋಪಿನಕಟ್ಟಿಯ ಪಿ.ಕೆ. ಕುಂಬಾರ್ ಮತ್ತು ನಾರಾಯಣ್ ಕೆ. ಕುಂಬಾರ ಮೃತ ಸಹೋದರರು. ಇವರಿಬ್ಬರೂ ತೋಪಿನಕಟ್ಟಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

    ಹತ್ತು ದಿನಗಳ ಹಿಂದೆ ತಮ್ಮ ನಾರಾಯಣ್​ಗೆ ಕರೊನಾ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ‌ ಅಣ್ಣ ಪಿ.ಕೆ.ಕುಂಬಾರ್​ಗೂ ಸೋಂಕು ತಗುಲಿ ಇಬ್ಬರನ್ನೂ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ನಾಲ್ಕು ದಿನದ ಹಿಂದೆ ಪಿ.ಕೆ‌ ಕುಂಬಾರ್ ಮೃತಪಟ್ಟಿದ್ದು, ಇದಾದ ಎರಡು ದಿನಕ್ಕೆ ನಾರಾಯಣ್ ಕುಂಬಾರ್ ಕರೊನಾಗೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಹೋದರರಿಬ್ಬರನ್ನೂ ಕಳೆದುಕೊಂಡ ಕುಟುಂಬ ಅನಾಥವಾಗಿದೆ.

    ಕರೊನಾ ಭಯಕ್ಕೆ ನದಿಗೆ ಹಾರಿ ಪ್ರಾಣಬಿಟ್ಟ ಶಿಕ್ಷಕ! ಸಾವಿಗೂ ಮುನ್ನ ಪತ್ನಿಯ ಮನೆ ಮುಂದೆ ಇಟ್ಟಿದ್ದೇನು?

    ಕರೊನಾ ಪಾಸಿಟಿವ್​ ಬಂದರೂ ಮದ್ವೆ ಮನೆಗೆ ಬಂದ ವಕೀಲ! ಪ್ರಶ್ನಿಸಿದ್ದಕ್ಕೆ ಉಡಾಫೆ, ಮುಂದೆ ಆಗಿದ್ದೆಲ್ಲವೂ ಅವಾಂತರ

    ಬೆಳ್ಳಂಬೆಳಗ್ಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಭಯಾನಕ ಘಟನೆ! ಕಕ್ಕಾಬಿಕ್ಕಿಯಾಗಿ ಓಡಿದ ಕರೊನಾ ಸೋಂಕಿತರು, ಬೆಚ್ಚಿಬೀಳಿಸುತ್ತೆ ಆ ದೃಶ್ಯ

    ಅನುಮಾನಾಸ್ಪದವಾಗಿ ಪತ್ನಿ ಸತ್ತ 5 ದಿನಕ್ಕೆ ಸಾವಿನ ಮನೆಯ ಕದ ತಟ್ಟಿದ ಟೆಕ್ಕಿ! ಕಳೆದ ತಿಂಗಳಷ್ಟೆ ಮದ್ವೆ ಆಗಿದ್ದವರ ಬದುಕಲ್ಲಿ ದುರಂತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts