ಬಾಗಲಕೋಟೆ: ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಪ್ರವಾಹಕ್ಕೆ ಸಿಲುಕಿದ್ದು, ಕೃಷ್ಣಾ ತೀರದಲ್ಲಿ ಇರುವ ಸುಪ್ರಸಿದ್ಧ ಲಕ್ಷ್ಮೀ ನರಸಿಂಹ ದೇವಸ್ಥಾನವೂ ಜಲಾವೃತಗೊಂಡಿದೆ.
ಕೃಷ್ಣಾ ನದಿ ಪ್ರವಾಹದಿಂದ ಶೂರ್ಪಾಲಿ ಗ್ರಾಮಕ್ಕೆ ಅಪಾರ ಪ್ರಮಾಣದ ನೀರು ನುಗ್ಗಿದ್ದು, ಊರಿಗೆ ಊರೇ ನೀರಲ್ಲಿ ಮುಳುಗಿದೆ. ದೋಣಿಯಲ್ಲಿ ಸಾವಿರಾರು ಜನ-ಜಾನುವಾರುಗಳನ್ನು ಸ್ಥಳಾಂತರ ಮಾಡಲಾಗಿದೆ. 2500ಕ್ಕೂ ಹೆಚ್ಚು ಜನರಿರುವ ಈ ಗ್ರಾಮ ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ನಲುಗಿದೆ.
ಇನ್ನು ತುಬಚಿ ಗ್ರಾಮದ ಪರಿಸ್ಥಿತಿಯೂ ಹೇಳತೀರದು. ಕೃಷ್ಣಾ ನದಿ ಪ್ರವಾಹದ ನೀರು ಗ್ರಾಮದ ಬೀದಿಗಳಲ್ಲಿ ಎದೆಮಟ್ಟದ ವರೆಗೂ ಆವರಿಸಿದ್ದು, ಮನೆಗಳು, ಶಾಲೆ, ಗ್ರಾಮ ಪಂಚಾಯಿತಿ ಕಚೇರಿ ಎಲ್ಲವೂ ಜಲಾವೃತಗೊಂಡಿವೆ. ಈ ಊರಲ್ಲೂ ಜನ-ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ.
ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಕೊಕ್? ಸಂಭಾವ್ಯ ಸಚಿವರ EXCLUSIVE ಪಟ್ಟಿ ಇಲ್ಲಿದೆ
ಗಂಡನಿಗೆ ಹಣದಾಹ, ಮಾವನಿಗೆ ಕಾಮದಾಹ… ಪೊಲೀಸರ ಮುಂದೆ ನರಕಯಾತನೆ ಬಿಚ್ಚಿಟ್ಟ ಯುವತಿ
ಕಿಡ್ನ್ಯಾಪ್ ಆಗಿದ್ದ ಕೇರಳ ಯುವಕನನ್ನು ಪ್ರಾಣದ ಹಂಗು ತೊರೆದು ಕಾಪಾಡಿದ ಹಾಸನ ಪೊಲೀಸರು! ವಿಡಿಯೋ ವೈರಲ್