ಬೆಂಗಳೂರು: ನಟ ದರ್ಶನ್ ಕೇಸ್ನಲ್ಲಿ ಸಿನಿಮಾ ನಿರ್ದೇಶಕ, ಹಿರಿಯ ಪತ್ರಕರ್ತ ಇಂದ್ರಜಿತ್ ಲಂಕೇಶ್ ಎಂಟ್ರಿಯಾಗಿದ್ದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇಂದು ಬೆಳಗ್ಗೆ ಇಂದ್ರಜಿತ್ ಮಾಡಿದ್ದ ಗಂಭೀರ ಆರೋಪಕ್ಕೆ ದರ್ಶನ್ ತಿರುಗೇಟು ಕೊಟ್ಟಿದ್ದು, ಇಂದ್ರಜಿತ್ ಲಂಕೇಶ್ ದೊಡ್ಡ ಇನ್ವೇಸ್ಟಿಗೇಟರ್ ಎಂದು ಟೀಕಿಸಿದ್ದಾರೆ.
ಮೈಸೂರಿನ ಹೋಟೆಲ್ನಲ್ಲಿ ವೇಟರ್ ಮೇಲೆ ನಾನು ಹಲ್ಲೆ ನಡೆಸಿದ್ದೇನೆ ಎಂಬುದು ಇಂದ್ರಜಿತ್ ಆರೋಪ ಅಲ್ಲವೇ. ಅವರ ಆರೋಪವನ್ನು ಅವರೇ ಸಾಬೀತು ಮಾಡಲಿ. ಹಲ್ಲೆ ಅಂದ್ರೆ ಮುಖ, ಮೂತಿ ಗಾಯ ಆಗಿರುತ್ತೆ. ಯಾವುದೇ ಊಹಾಪೋಹಗಳನ್ನು ನಂಬಬೇಡಿ. ಊಟ ತಡವಾಗಿ ತಂದಿದ್ದಕ್ಕೆ ಏಕೆ ಲೇಟ್ ಎಂದು ಕೇಳಿದ್ದೇ ತಪ್ಪಾ? ಈ ಪ್ರಕರಣದಲ್ಲಿ ಜಾತಿಯನ್ನೂ ತರುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನು ಅರುಣಾ ಕುಮಾರಿ ಬೆನ್ನಿಗೆ ಇಂದ್ರಜಿತ್ ನಿಂತಿದ್ದಾರಾ? ನಿಲ್ಲಲಿ. ಈ ಪ್ರಕರಣದಲ್ಲಿ XYZ ಬರಲಿ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಅಂದಿನಿಂದ ಇಲ್ಲದ ಇಂದ್ರಜಿತ್ ಈಗ ಏಕೆ ಬಂದ್ರು? ಎಂದು ಪ್ರಶ್ನಿಸಿದ್ದಾರೆ.
ಸೆಲೆಬ್ರಿಟಿ ಅನ್ನೋದನ್ನು ಪಕ್ಕಕ್ಕಿಡಿ, ನಾನೂ ಒಬ್ಬ ಮನುಷ್ಯ. ಪ್ರಕರಣ ಪೊಲೀಸ್ ತನಿಖೆಯಲ್ಲಿದೆ. ತನಿಖೆ ಮಾಡಲು ಬಿಡಿ. ಸುಮ್ಮನೆ ಏನೇನೋ ಹೇಳೋದಲ್ಲ ಎಂದು ದರ್ಶನ್ ಹೇಳಿದರು.
ನನ್ನದು ಮತ್ತು ಸಂದೇಶ್ದ್ದು ಸಾವಿರ ಗಲಾಟೆ ಇದೆ. ನಮ್ಮದ್ದನ್ನು ನಾವು ನೋಡಿಕೊಳ್ತೇವೆ. ಅದು ಬಿಟ್ಟು ಬಿಡಿ. ಇಂದ್ರಜಿತ್ ಅವ್ರು ದೊಡ್ಡ ತನಿಖಾದಾರರು, ನಾಲ್ಕು ದಿನದ ಲೆಕ್ಕ ತೆಗೆದುಕೊಳ್ಳಲಿ. ಇಂದ್ರಜಿತ್ ಲಂಕೇಶ್ ಅವ್ರು ಇಂಟರ್ವ್ಯೂ ಕೇಳಿ ಎರಡು ಬಾರಿ ಕರೆ ಮಾಡಿದ್ರು. ನಾನು ಈಗ ಆಗಲ್ಲ ಅಂದೆ, ಅವರು ನನ್ನ ಒಂದು ಸಿನೆಮಾ ನಿರ್ದೇಶನ ಮಾಡಿದ್ದಾರೆ. ಈಗ ಈ ಇಶ್ಯೂ ಮಾಡಿ ಹೊಸದಾಗಿ ಏನೋ ಡೈರೆಕ್ಟ್ ಮಾಡ್ತಿದ್ದಾರೆ ಎಂದರು.
ಈಗ ಮೈಸೂರಿಗೆ ಹೋಗ್ತಾ ಇದ್ದೇನೆ. ಆಷಾಢ ಶುಕ್ರವಾರ, ಚಾಮುಂಡಿ ದೇವಿ ದರ್ಶನ ಮಾಡುತ್ತೇನೆ. ಉಮಾಪತಿ, ಹರ್ಷಗೆ ಹೇಳಿದ್ದೇನೆ ಮಾಧ್ಯಮಗಳಿಗೆ ಹೇಳಿಕೆ ಕೊಡುವುದು ನಿಲ್ಲಿಸಿ ಎಂದು. ಪೊಲೀಸ್ ತನಿಖೆ ನಡೆದ ಮೇಲೆ ಮಾತನಾಡ್ತೇನೆ. ನಾಯಿ ನನಗೆ ಕಚ್ಚಿದರೆ ಸ್ಕ್ರಾಲಿಂಗ್ ಸುದ್ದಿ. ಅದೇ ನಾಯಿಗೆ ದರ್ಶನ್ ಕಚ್ಚಿದರೆ ಬ್ರೇಕಿಂಗ್ ಸುದ್ದಿ ಆಗುತ್ತೆ ಎಂದರು.
ಅರುಣಾಕುಮಾರಿಯ ಪ್ರೇಮ್ಕಹಾನಿ ಬಿಚ್ಚಿಟ್ಟ ನಟ ದರ್ಶನ್! 9 ವರ್ಷ ಚಿಕ್ಕವನೊಂದಿಗೆ ಲವ್ವಿಡವ್ವಿ ಶುರು ಮಾಡಿದ್ದಳಂತೆ…
ಪಿಎಸ್ಐ ಆಗಿರುವ ತಾಯಿ ವಿರುದ್ಧವೇ ಗದಗ ಎಸ್ಪಿಗೆ ದೂರು ಕೊಟ್ಟ ಯುವತಿ!
ಕಾರಿನಲ್ಲಿ ಕೂತು ನಟ ದರ್ಶನ್ ಮಹಿಳೆಗೆ ಕಿರುಕುಳಕೊಟ್ಟರು: ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ