More

    ತೆಂಗಿನ ಮರ ಬಿದ್ದು ಒರ್ವ ಸಾವು

    ಲಿಂಗದಹಳ್ಳಿ: ಲಿಂಗದಹಳ್ಳಿ ಸಮೀಪ ಸೋಮವಾರ ಸಂಜೆ ಬೀಸಿದ ಬಿರುಗಾಳಿಯಿಂದ ಓಮ್ನಿ ಕಾರ್ ಮೇಲೆ ತೆಂಗಿನಮರ ಮತ್ತು ವಿದ್ಯುತ್ ಕಂಬಗಳು ಬಿದ್ದು ಕಾರಿನಲ್ಲಿದ್ದ ದೇವರಾಜಾಚಾರ್ (38) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.
    ಕಡೂರು ಸಮೀಪದ ಮತಿಘಟ್ಟ ಗ್ರಾಮದ ಐವರು ಕಲ್ಲತ್ತಿಗಿರಿಗೆ ಪೂಜೆ ಮಾಡಿಸಲು ಬರುತ್ತಿದ್ದಾಗ ಲಿಂಗದಹಳ್ಳಿ ಸಮೀಪ ಕಾರ್ ಮೇಲೆ ತೆಂಗಿನಮರ ಮತ್ತು ವಿದ್ಯುತ್ ಕಂಬಗಳು ಬಿದ್ದಿವೆ. ಇದರಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಎರೇಹಳ್ಳಿ ಗ್ರಾಮದ ಹನುಮಪ್ಪ (58) ಎಂಬವವರಿಗೆ ತೀವ್ರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗದಹಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts