ತೀರ್ಥಹಳ್ಳಿ: ತಾಲೂಕು ಜಯಚಾಮರಾಜೇಂದ್ರ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಪ್ರಭಾಕರ್ ಅವರ ಕಾರು ಚಿಕ್ಕಮಗಳೂರು ಸಮೀಪದ ಆಲ್ದೂರು ಬಳಿ ಅಪಘಾತಕ್ಕೀಡಾಗಿದ್ದು ಅದೃಷ್ಟವಶಾತ್ ಪ್ರಭಾಕರ್ ದಂಪತಿ ಅಪಾಯದಿಂದ ಪಾರಾಗಿದ್ದಾರೆ. ಡಾ. ಪ್ರಭಾಕರ್ ಅವರ ಪತ್ನಿ ಚಿಕ್ಕಮಗಳೂರಿನಲ್ಲಿ ಪರೀಕ್ಷೆಯೊಂದನ್ನು ಬರೆಯಲು ಭಾನುವಾರ ಬೆಳಗ್ಗೆ 5 ಗಂಟೆಗೆ ದಂಪತಿ ತೀರ್ಥಹಳ್ಳಿಯಿಂದ ಹೊರಟಿದ್ದರು. ಆಲ್ದೂರಿನ ಬಳಿ ಎದುರಿನಿಂದ ಬಂದ ಕಾರು ಅಪ್ಪಳಿಸಿದ ಪರಿಣಾಮ ದಂಪತಿ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಇಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ.