ನವದೆಹಲಿ: ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಗೆ ರಾಜ್ಪಥ್ನಲ್ಲಿ ಕ್ಷಣಗಣೆ ಆರಂಭವಾಗಿದೆ. ಗಣರಾಜ್ಯೋತ್ಸವದಂದು ಭಾರತದ ಸೇನೆಯ ಶಕ್ತಿ, ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಆಗಿರುವ ಪ್ರಗತಿ ಅನಾವರಣಗೊಳ್ಳಲಿದೆ.
ಬ್ರೆಜಿಲ್ ಅಧ್ಯಕ್ಷ ಜೈರ್ ಮೆಸ್ಸಿಯಾಸ್ ಬೋಲ್ಸೊನಾರೊ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ
ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾರತ ಗೇಟ್ ಬಳಿ ಇರುವ ಹುತಾತ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಇಂಡಿಯಾ ಗೇಟ್ ಗೌರವ ಸಲ್ಲಿಸುವ ಬದಲು ಇದೆ ಮೊದಲ ಬಾರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ಗೌರವ ಸಲ್ಲಿಸುತ್ತಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪಥ ಸಂಚಲನಕ್ಕೆ ಚಾಲನೆ ನೀಡಲಿದ್ದಾರೆ. ಭಾರತೀಯ ಸೇನೆಯ ಯುದ್ಧ ಟ್ಯಾಂಕರ್, ಭೀಷ್ಮಾ, ಉಪಗ್ರಹ ವಿರೋಧಿ ಶಸ್ತ್ರಾಸ್ತ್ರ ಮಿಷನ್ ಶಕ್ತಿ, ಕಾಲಾಳುಪಡೆ, ಯುದ್ಧ ವಾಹನಗಳು ಮತ್ತು ಭಾರತೀಯ ವಾಯು ಪಡೆಯ (ಐಎಎಫ್) ಹೊಸದಾಗಿ ಸೇರ್ಪಡೆಗೊಂಡ ಚಿನೂಕ್ ಮತ್ತು ಅಪಾಚೆ ಹೆಲಿಕಾಪ್ಟರ್ಗಳ ಪ್ರದರ್ಶನ ನಡೆಯಲಿದೆ.
ಭಾರತೀಯ ಸೇನೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಮುಖ್ಯ ಯುದ್ಧದ ಟ್ಯಾಂಕರ್ ಟಿ -90 ಭೀಷ್ಮಾ ಟ್ಯಾಂಕರ್, ಕಾಲಾಳುಪಡೆ ಯುದ್ಧ ವಾಹನ ಬಾಲ್ವೇ ಮೆಷಿನ್ ಪಿಕೇಟ್, ಕೆ -9 ವಜ್ರಾ ಮತ್ತು ಧನುಷ್ ಬಂದೂಕುಗಳು, ಸಾಗಿಸಬಹುದಾದ ಉಪಗ್ರಹ ಟರ್ಮಿನಲ್ ಮತ್ತು ಆಕಾಶ್ ಶಸ್ತ್ರಾಸ್ತ್ರ ಪ್ರಮುಖ ಆಕರ್ಷಣೆಯಾಗಿದೆ.
ಗಣರಾಜ್ಯೋತ್ಸವದ ಮೆರವಣಿಗೆಯನ್ನು ದೆಹಲಿ ಪ್ರದೇಶದ ಪೆರೇಡ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಸಿತ್ ಮಿಸ್ತ್ರಿ ವಹಿಸಲಿದ್ದಾರೆ. ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. (ಏಜೆನ್ಸೀಸ್)