ನವದೆಹಲಿ: ಹಮಾಸ್ ಉಗ್ರರನ್ನು ಗುರುಯಾಗಿಸಿಕೊಂಡು ಇಸ್ರೇಲ್ ತನ್ನ ಬರ್ಬರ ದಾಳಿಯನ್ನು ಶನಿವಾರವೂ ಮುಂದುವರೆಸಿದ್ದು, 240 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ರಾಕೆಟ್ ಹಾಗೂ ಬಾಂಬ್ ದಾಳಿಯಿಂದಾಗಿ ಇಡೀ ಗಾಜಾ ನಗರವೇ ದಟ್ಟ ಹೊಗೆಯಿಂದ ಆವರಿಸಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇತ್ತ ಇಸ್ರೇಲ್ ದಾಳಿ ಶುರುವಾಗುತ್ತಿದ್ದಂತೆ ಹಮಾಸ್ ತನ್ನ ಸೇನಾ ಪಡೆಗಳಿಗೆ ಯುದ್ದ ಆರಂಭಿಸುವಂತೆ ಕರೆ ಕೊಟ್ಟಿದ್ದು, ಗಾಜಾಪಟ್ಟಿ ಕಾಪಾಡಿ ಎಂದು ಸಂದೇಶ ರವಾನಿಸಿದೆ.
ಕದನ ವಿರಮ ಅಂತ್ಯಗೊಂಡ ಬಳಿಕ ಇಸ್ರೇಲ್ ಹಮಾಸ್ನಲ್ಲಿರುವ 400ಕ್ಕೂ ಅಧಿಕ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಭೂ, ವಾಯು ಹಾಗೂ ನೌಕಾ ಪಡೆ ಈ ದಾಳಿಯಲ್ಲಿ ಭಾಗಿಯಾಗಿದ್ದವು. ಇಸ್ರೇಲ್ ಯುದ್ದ ವಿಮಾನಗಳು ಖಾನ್ ಯೂನಿಸ್ ನಗರದಲ್ಲಿರುವ 50ಕ್ಕೂ ಅಧಿಕ ನೆಲೆಗಳನ್ನು ನಾಶಪಡಿಸಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಗುರು ರಾಘವೇಂದ್ರ ಸಹಕಾರ ಬಬ್ಯಾಂಕ್ ಅವ್ಯವಹಾರ; ಪ್ರಕರಣವನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ
ಇಸ್ರೇಲ್ ಹಾಗೂ ಹಮಾಸ್ ನಡುವೆ ವಾರಗಳ ಕಾಲ ಅಸ್ತಿತ್ವದಲ್ಲಿದ್ದ ಕದಮ ವಿರಾಮ ಸಮಯದಲ್ಲಿ 80ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಮಾಸ್ ಬಂಡುಕೋರರು ಬಿಡುಗಡೆ ಮಾಡಿದ್ದರ, ಇಸ್ರೇಲ್ 240ಕ್ಕೂ ಪ್ಯಾಲಸ್ಟೇನಿಯರನ್ನು ಬಿಡುಗಡೆ ಮಾಡಿತ್ತು. ಕದಮ ವಿರಾಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಇಸ್ರೇಲ್ ಹಾಗೂ ಹಮಾಸ್ ಶುಕ್ರವಾರದಿಂದ ಯುದ್ದ ಆರಂಭಿಸಿವೆ.
ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000 ರಾಕೆಟ್ಗಳಿಂದ ದಾಳಿ ನಡೆಸಿ 1,500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಳಿಕ ಇಸ್ರೇಲ್ ನಡೆಸಿದ ಪ್ರತಿದಾಳೀಯಲ್ಲಿ ಗಾಜಾದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.