More

    112 ಕೋಟಿ ರೂ.ಗೆ ಹಿಗ್ಗಿದ ಚಿತ್ರದುರ್ಗ ನಗರಸಭೆ ಬಜೆಟ್ ಗಾತ್ರ

    ಚಿತ್ರದುರ್ಗ: ಚಿತ್ರದುರ್ಗ ನಗರಸಭೆ 2024-25ನೇ ಸಾಲಿನ ಬಜೆಟ್ ಒಪ್ಪಿಗೆಗೆ ಅಗತ್ಯ ಸಿದ್ಧ್ದತೆ ನಡೆದಿದ್ದು,ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕ ರೊಂದಿಗೆ ಆಯವ್ಯಯ ಕುರಿತಾದ ಸಮಾಲೋಚನೆ ಸಭೆಯನ್ನು ನಗರಸಭೆಯಲ್ಲಿ ಶನಿವಾರ ಸಭೆ ನಡೆಸಲಾಯಿತು.
    ಕಳೆದ ವರ್ಷದ 92 ಕೋಟಿ ರೂ.ಬಜೆಟ್ ಮೊತ್ತ,ಈ ಬಾರಿ 112.78 ಕೋಟಿ ರೂ.ಗೆ ಏರಿಕೆಯಾಗಿದ್ದು,ರಸ್ತೆ, ಚರಂಡಿ,ಕುಡಿಯುವ ನೀರು,ನೈರ್ಮಲ್ಯೀ ಕರಣ,ನಗರ ಸೌಂದರ್ಯಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಲಾಗಿದೆ. ಆಸ್ತಿ ತೆರಿಗೆ,ನೀರಿನ ಶುಲ್ಕ,ಬಾಡಿಗೆ,ಉದ್ದಿಮೆ ಪರವಾನಗಿ,ಅಭಿವೃದ್ಧಿ ಶುಲ್ಕ ಹಾಗೂ ಇತರೆ ಆದಾಯಗಳ ಸಹಿತ 30.53 ಕೋಟಿ ನಗರಸಭೆ ಸ್ವಂತ ಆದಾಯವಿದೆ ಎಂದು ಆಯುಕ್ತೆ ಎಂ.ರೇಣುಕಾ ಹೇಳಿದರು.
    ರಾಜ್ಯಸರ್ಕಾರದಿಂದ ಎಸ್‌ಎಫ್‌ಸಿ,ನಗರೋತ್ಥಾನ ಹಾಗೂ ಡಿಎಂಎಫ್‌ಟಿ ಶಾಸಕರ ಅನುದಾನ ಸೇರಿ 71.20 ಕೋಟಿ ರೂ.,ಕೇಂದ್ರದ 15ನೇ ಹಣಕಾಸು, ನಲ್ಮ್,ಸ್ವಚ್ಛ ಭಾರತ್ ಮಿಷನ್ ಹಾಗೂ ಇತರೆ ಅನುದಾನಗಳ ಸೇರಿ 11.05 ಕೋಟಿ ರೂ.ಗಳೊಂದಿಗೆ,ಒಟ್ಟು 112.78 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದ್ದು,ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಒಪ್ಪಿಗೆ ಪಡೆಯ ಬೇಕಿ ದೆ ಎಂದು ಆಯುಕ್ತರು ತಿಳಿಸಿದರು.
    ಬೀದಿದೀಪ,ನೀರು ಸರಬರಾಜು,ನಗರಸಭೆಗೆ ಸಂಬಂಧಿಸಿದ ಕಚೇರಿ,ಕಟ್ಟಡ,ಗ್ರಂಥಾಲಯಗಳ ವಿದ್ಯುತ್‌ಬಿಲ್ ಪಾವತಿಗೆ 21 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ರಸ್ತೆಗಳ ಅಭಿವೃದ್ಧಿಗೆ 18.75 ಕೋಟಿ ರೂ.,ತಾಜ್ಯನಿರ್ವಹಣೆ,ತಾಜ್ಯಸಂಗ್ರಹಣೆ ವಾಹನಗಳು, ಶೌಚ ಗೃಹಗಳ ಅಭಿವೃದ್ಧಿ,ಹೊರಗುತ್ತಿಗೆ ನೌಕರರ ವೇತನ,ಇಂಧನ ಸೇರಿ ನಗರದ ನೈರ್ಮಲ್ಯೀಕರಣ ಕಾರ್ಯಗಳಿಗೆ 13.50 ಕೋಟಿ ರೂ.
    ನಗರಸಭೆ ಸಿಬ್ಬಂದಿ ವೇತನಕ್ಕೆ 10 ಕೋಟಿ ರೂ.,ನಗರದ ಸೌಂದರ್ಯೀಕರಣಕ್ಕೆ,ಆಟೋ ನಿಲುಗಡೆ, ಪಾರ್ಕಿಂಗ್,ಖಾಸಗಿ ಬಸ್ ನಿಲ್ದಾ ಣ ನವೀಕರಣ,ನಾಮಫಲಕಗಳ ಅಳವಡಿಕೆ ಹಾಗೂ ನಗರದ ಪ್ರಮುಖ ವೃತ್ತಗಳ ಅಭಿವೃದ್ಧಿಗೆ 7 ಕೋಟಿ ರೂ.ಒದಗಿಸಲಾಗಿದೆ.
    ಚರಂಡಿ ಹಾಗೂ ಒಳಚರಂಡಿಗಳ ನಿರ್ಮಾಣ,ನಿರ್ವಹಣೆಗೆ 9 ಕೋಟಿ ರೂ.,ನೀರು ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳು, ಹೊರಗುತ್ತಿಗೆ ನೌಕರರ ವೇತನಕ್ಕೆ 8 ಕೋಟಿ ರೂ.,ಉದ್ಯಾನ ಮತ್ತು ರುದ್ರಭೂಮಿಗಳ ಅಭಿವೃದ್ಧಿಗೆ 3.25 ಕೋಟಿ ರೂ.,ಬೀದಿ ದೀಪಗಳ ಅಳವಡಿಕೆಗೆ 3 ಕೋಟಿ ರೂ.ಮೀಸಲಿಡಲಾಗಿದೆ.
    ಕಚೇರಿ ವೆಚ್ಚಗಳ ನಿರ್ವಹಣೆಗೆ 3.75 ಕೋಟಿ ರೂ.,ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗ ಮತ್ತು ಅಂಗವಿಕಲರ ಕಲ್ಯಾ ಣಕ್ಕಾಗಿ 1.50 ಕೋಟಿ ರೂ.,ಸ್ವಚ್ಛ ಭಾರತ್‌ಮಿಷನ್‌ಗೆ 1.50 ಕೋಟಿ ರೂ.,ಜಾಹೀರಾತು ಹಾಗೂ ಇತರೆ ವೆಚ್ಚಗಳಿಗೆ 1 ಕೋಟಿ ರೂ.ಹಾ ಗೂ ನಲ್ಮ್ ಯೋಜನೆಗೆ 50 ಲಕ್ಷ ರೂ.ಖರ್ಚಾಗುವ ನಿರೀಕ್ಷೆಯಿದೆ. ರಾಜ್ಯಸರ್ಕಾರಕ್ಕೆ 3.75 ಕೋಟಿ ರೂ.ಸೆಸ್ ಹಾಗೂ 1 ಕೋಟಿ ರೂ.ಬಾಕಿ ಪಾವತಿಗೂ ಅವಕಾಶ ಮಾಡಿಕೊಳ್ಳಲಾಗಿದೆ.
    ಹಸಿರೀಕರಣ ಯೋಜನೆ
    ನಗರದ ಅಭಿವೃದ್ಧಿಗೆಂದು ಗಿಡ ಮರಗಳನ್ನು ತೆರವುಗೊಳಿಸಲಾಗಿದ್ದು,ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಗರದಲ್ಲಿ ಸಸಿಗಳನ್ನು ನೆಡಲು ಯೋಜನೆ ರೂಪಿಸುವಂತೆ ಸದಸ್ಯರು ಸಲಹೆ ನೀಡಿದರು.
    ಉದ್ಯಾನಗಳು,ನಗರಸಭೆ ಜಾಗಗಳಲ್ಲಿ ಗಿಡಗಳನ್ನು ನೆಡಲು ಕ್ರಮ ವಹಿಸಲಾಗುವುದು. ನಗರದ ಟಾರ್ಗೆಟ್ ಯುವ ವೇದಿಕೆಯಿಂದ ನೆಟ್ಟಿರುವ ಗಿಡಗಳ ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ. ಗಿಡಗಳಿಗೆ ಎಸ್‌ಟಿಪಿ ಪ್ಲಾಂಟ್‌ಗಳಲ್ಲಿ ಶುದ್ಧೀಕರಿಸಿದ ನೀರನ್ನು ಪೂರೈಸಲು ಪ್ರತ್ಯೇಕ ಟ್ಯಾಂಕರ್ ಮೀಸಲಿಡಲಾಗುವುದೆಂದು ಪೌರಾಯುಕ್ತರು ಹೇಳಿದರು.
    ಪ್ರಮುಖ ವೃತ್ತಗಳ ಅಭಿವೃದ್ಧಿ
    ನಗರದ ಪ್ರಮುಖ ವೃತ್ತಗಳಲ್ಲಿರುವ ಪುತ್ಥಳಿ,ಪ್ರತಿಮೆಗಳಿಗೆ ಚಾವಣಿ ನಿರ್ಮಾಣ, ಕೈದೋಟ,ವಿದ್ಯುತ್‌ದೀಪಾಲಂಕಾರ, ಸಂಚಾರಿ ದೀ ಪಗಳನ್ನು ಅಳವಡಿಸಲಾಗುವುದೆಂದು ಆಯಕ್ತರು ಹೇಳಿದರು. ನಗರದಲ್ಲಿ ಆಧುನಿಕ ನಾಮಫಲಕಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರ ಮನವಿಯಂತೆ ಕೆಲವೆಡೆ ಡಿವೈಡರ್‌ಗಳನ್ನು ತೆರವುಗೊಳಿಸಲಾಗಿದೆ ಎಂದರು.
    ಆಟೋ ಟಿಪ್ಪರ್ ಖರೀದಿಗೆ ಟೆಂಡರ್
    ಕಸ ಸಂಗ್ರಹಣೆಗೆ 22 ಆಟೋ-ಟಿಪ್ಪರ್ ಖರೀದಿಗೆ ಟೆಂಡರ್ ಕರೆಯಲಾಗುವುದು. ಈಗಿರುವ 31 ಆಟೋ ಟಿಪ್ಪರ್‌ಗಳ ಪೈಕಿ 10-12 ವಾಹನಗಳು ನಿರುಪಯುಕ್ತವಾಗಿವೆ. ನಗರದ 35 ವಾರ್ಡ್‌ಗಳಿವೆ, ಪ್ರತಿ ವಾರ್ಡ್‌ಗೂ ಕಸ ಸಂಗ್ರಹಣೆಗೆ ಪ್ರತ್ಯೇಕ ಆಟೋ ಟಿಪ್ಪರ್ ನಿಗದಿ ಪಡಿಸಲಾಗುತ್ತಿದ್ದು,ಏಪ್ರಿಲ್ 1ರಿಂದ ಈ ವಾಹನಗಳು ಕಾರ‌್ಯಾರಂಭ ಮಾಡಲಿವೆ. ಎರಡು ನೀರಿನ ಟ್ಯಾಂಕರ್‌ಗಳೊಂದಿಗೆ,ಹೊಸದಾಗಿ 3 ಹೊಸ ಟ್ಯಾಂಕರ್‌ಗಳನ್ನು ಹಾಗೂ ಇನ್ನೊಂದು ಮುಕ್ತಿ ವಾಹನ ಖರೀದಿಸು ವು ದಾಗಿ ಆಯುಕ್ತರು ತಿಳಿಸಿದರು.
    ಜಿ.ಹರೀಶ್,ಕೆ.ಮಂಜುಳಾ,ಶಕೀಲಾಬಾನು,ಭಾಗ್ಯಮ್ಮ, ಎಸ್.ಜಯಪ್ಪ,ಎಂ.ಪಿ.ಅನಿತಾ,ಮಹ್ಮದ್‌ದಾವುದ್,ಮೊಹಮ್ಮದ್ ಜೈಲಾ ಬ್‌ದ್ದೀನ್,ಸುಮಿತಾ,ದೀಪಕ್,ಎಸ್.ಸಿ.ತಾರಕೇಶ್ವರಿ ಮತ್ತಿತರ ಸದಸ್ಯರು, ಮುಖ್ಯಲೆಕ್ಕಾಧಿಕಾರಿ ಮೆಹಬೂಬ್‌ಅಲಿ,ಕಂದಾಯಾಧಿಕಾರಿ ಟಿ. ಜಯಪ್ಪ,ರಘುವೀರ್,ಕೆ.ಪುಟ್ಟಪ್ಪ ಮೊದಲಾದ ಅಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts