More

    ಹುಬ್ಬಳ್ಳಿ ಕೆಸಿಸಿಐ ಆಡಳಿತ ಮಂಡಳಿಗೆ ಆಯ್ಕೆ

    ಹುಬ್ಬಳ್ಳಿ: ಇಲ್ಲಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಬುಧವಾರ ಜರುಗಿದ 93ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ 2025ರ ವರೆಗೆ ಮೂರು ವರ್ಷಗಳ ಅವಧಿಗೆ ನೂತನ ಆಡಳಿತ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

    ಹುಬ್ಬಳಿ-ಧಾರವಾಡ ಮಹಾನಗರ ಪಾಲಿಕೆ ಕ್ಷೇತ್ರದಿಂದ ಪ್ರಕಾಶ ಶೃಂಗೇರಿ, ವಿದ್ಯಾಧರ ಯಲಗಚ್ಛ, ಅಶೋಕ ಲದವಾ, ಬಸವರಾಜ ಯಕಲಾಸಪೂರ, ಮಹೇಂದ್ರ ಠಕ್ಕರ, ಶಾಶ್ವತ ಪೂಜಾರ, ಶಿವಯೋಗಿ ಹಪ್ಪಳದ, ವೀರಣ್ಣ ಕಲ್ಲೂರ, ರಾಜಕಿರಣ ಮೆಣಸಿನಕಾಯಿ.

    ಮಹಾನಗರ ಪಾಲಿಕೆ ಹೊರತುಪಡಿಸಿ ಮಾಲತೇಶ ಅರಳಿಮಟ್ಟಿ (ಬ್ಯಾಡಗಿ), ವಿಶಾಲ ಜೈನ್ (ಇಳಕಲ್ಲ), ಮಂಜುನಾಥ ಹೆಗಡೆ (ಹೊನ್ನಾವರ), ಬಸವರಾಜ ಜವಳಿ (ಬೆಳಗಾವಿ), ಗುರುಸಿದ್ದೇಶ ಕೋತಂಬ್ರಿ (ಹೊಸಪೇಟೆ), ಉಮೇಶ ಪಟ್ಟಣಶೆಟ್ಟಿ (ರಾಣೆಬೆನ್ನೂರ) ಅವರು ಆಯ್ಕೆಯಾಗಿದ್ದಾರೆ. ಚುನಾವಣೆ ಅಧಿಕಾರಿಯಾಗಿ ಜಿ.ಕೆ. ಆದಪ್ಪಗೌಡರ ಕಾರ್ಯನಿರ್ವಹಿಸಿದರು.

    ಅಧ್ಯಕ್ಷ ವಿನಯ ಜವಳಿ, ಉಪಾಧ್ಯಕ್ಷರಾದ ಎಸ್.ಪಿ. ಸಂಶಿಮಠ, ಸಂದೀಪ ಬಿಡಸಾರಿಯಾ, ಬಿ.ಎಸ್. ಸತೀಶ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಜತೆ ಗೌರವ ಕಾರ್ಯದರ್ಶಿ ಶಂಕರ ಕೋಳಿವಾಡ, ಮಾಜಿ ಅಧ್ಯಕ್ಷರಾದ ಶಂಕರಣ್ಣ ಮುನವಳ್ಳಿ, ಎಂ.ಸಿ. ಹಿರೇಮಠ, ವಸಂತ ಲದವಾ, ರಮೇಶ ಪಾಟೀಲ, ಮಹೇಂದ್ರ ಲದ್ದಡ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts