More

    ಸಂಭ್ರಮದ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ

    ಲಕ್ಷ್ಮೇಶ್ವರ: ಬನದ ಹುಣ್ಣಿಮೆ ನಿಮಿತ್ತ ಪಟ್ಟಣದ ಕೆಂಚಲಾಪುರ ಓಣಿ ಬನಶಂಕರಿ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ಸತ್ಯ ನಾರಾಯಣ ಪೂಜೆ ಅಪಾರ ಭಕ್ತ ಸಮೂಹದ ನಡುವೆ ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನಡೆಯಿತು.

    ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಮಹಾಬಳೇಶ್ವರಪ್ಪ ಬೇವಿನಮರದ ಮಾತನಾಡಿ, ‘ಬನಶಂಕರಿದೇವಿ ನಾಡಿನ ಜನರ ಆರಾಧ್ಯದೇವಿಯಾಗಿದ್ದಾಳೆ. ಸಮಾಜದಲ್ಲಿ ಮಹಿಳೆಯರನ್ನು ಗೌರವ, ಪೂಜ್ಯನೀಯ ಭಾವನೆಯಿಂದ ಕಾಣಬೇಕು. ನೂತನ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆಯಂದು ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ, ಪ್ರಸಾದ ವಿತರಿಸಲಾಗುತ್ತಿದೆ’ ಎಂದರು.

    ಲಕ್ಷ್ಮಣ ಮೆಡ್ಲೇರಿ, ನಾರಾಯಣಪ್ಪ ಗಾರಗಿ, ಈಶ್ವರ ಮೆಡ್ಲೇರಿ, ಗಣೇಶ ಬೇವಿನಮರದ, ಗುರು ಮೆಡ್ಲೇರಿ, ಈಶ್ವರ ಬನ್ನಿಕೊಪ್ಪ, ಚಿದಾನಂದ ಬೇವಿನಮರದ, ವಸಂತ ಬೇವಿನಮರದ, ಈಶ್ವರಪ್ಪ ಹುಳ್ಳಿ, ನೀಲಪ್ಪ ಕರ್ಜೆಕಣ್ಣವರ, ಮಹಿಳಾ ಸಾಹಿತಿ ಲಲಿತಕ್ಕ ಕೆರಿಮನಿ, ಶಿಕ್ಷಕಿ ಡಿ.ಎಫ್. ಪಾಟೀಲ, ಮಹಾದೇವಪ್ಪ ಪಾತಾಳಿ, ಚಿಕ್ಕಣ್ಣ ಪೂಜಾರ, ಪಾಂಡುರಂಗ ಹುಬ್ಬಳ್ಳಿ, ಮಹಾಬಳೇಶ್ವರ ಮೆಡ್ಲೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts