ಕೆ.ಆರ್.ಸಾಗರ: ಸಮೀಪದ ನಾರ್ತ್ಬ್ಯಾಂಕ್ ಗ್ರಾಮದಲ್ಲಿ ಶ್ರೀ ಕಾಳಮ್ಮ (ಕನ್ನಂಬಾಡಿ ಮಹಾಲಕ್ಷ್ಮೀ) ಜಾತ್ರೆ ಪ್ರಯುಕ್ತ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಧರ ದೀಕ್ಷಿತ್, ಅರ್ಚಕರಾದ ಶಿವಕುಮಾರ್, ಸುಬ್ರಮಣ್ಯ ಸಮ್ಮುಖದಲ್ಲಿ ರಥೋತ್ಸ ನಡೆಯಿತು. ಕಾಳಮ್ಮ ದೇವರಿಗೆ ಜೈ ಎಂಬ ಭಕ್ತರ ಘೋಷದೊಂದಿಗೆ ರಥ ದೇವಸ್ಥಾನದ ಸುತ್ತ ಪ್ರದಕ್ಷಣಿಗೆ ಹಾಕಿತು. ಈ ಸಂದರ್ಭದಲ್ಲಿ ಭಕ್ತರು ಹೂ-ಧವನ-ಬಾಳೆಹಣ್ಣು ಎಸೆದರು.
ಕಾಳಮ್ಮ (ಕನ್ನಂಬಾಡಿ ಮಹಾಲಕ್ಷ್ಮಿ) ಜಾತ್ರೆ ಪ್ರಯುಕ್ತ ದೇವಸ್ಥಾನಕ್ಕೆ ಭಕ್ತರು ಆಗಮಿಸಿ ದರ್ಶನ ಪಡೆದರು. ಮಂಡ್ಯ, ಮೈಸೂರು, ಹಾಸನ, ಚಾಮರಾಜನಗರ, ಬೆಂಗಳೂರು ಜಿಲ್ಲೆ ಸೇರಿದಂತೆ ವಿವಿಧ ಕಡೆಯಿಂದ ಭಕ್ತರು ಆಗಮಿಸಿದ್ದರು.