ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘ, ಜೆಸಿಆರ್ ಗಣಪತಿ ದೇಗುಲ ಸೇವಾ ಸಮಿತಿಯಿಂದ ದೇಗುಲ ಆವರಣದಲ್ಲಿ ನಡೆದ ಮಾಸಿಕ ಗಮಕ ಕಾರ್ಯಕ್ರಮವನ್ನು ಬೆಂಗಳೂರಿನ 9 ವರ್ಷದ ಬಾಲಪ್ರತಿಭೆ ದೀಕ್ಷಾ ಭಟ್ ನಡೆಸಿಕೊಟ್ಟಳು.
ಕಲಾವಿದರಾದ ಮಂಜುನಾಥ್, ಅಭಿಷೇಕ್, ಅಮೋಘಾ, ಸುಮಾ ಜೀವನ್, ದೇಗುಲ ಸಮಿತಿ ಉಪಾಧ್ಯಕ್ಷ ಚಿದಾನಂದಪ್ಪ, ವಿ.ಸ್ವರ್ಣಾ ಜಗನ್ನಾಥ್, ಶಶಿಧರ್ ಶ್ಯಾನುಬೋಗ್, ಸಂಘದ ಅಧ್ಯಕ್ಷೆ ಕೆ.ಆರ್.ರಮಾದೇವಿ ವೆಂಕಣ್ಣಾಚಾರ್, ನಿರ್ದೇಶಕಿ ಸುಶೀಲಾ ಪ್ರಸಾದ್, ವಿ.ಮೀನಾಕ್ಷಿ ಭಟ್ ಇತರರಿದ್ದರು.