More

    ಮತ್ತಿಬ್ಬರು ಗಾಂಜಾ ಮಾರಾಟಗಾರರ ಬಂಧನ

    ಹುಬ್ಬಳ್ಳಿ: ಅಕ್ರಮ ಗಾಂಜಾ ಮಾರಾಟ ಮಾಡಲು ಮುಂದಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಆರ್ಥಿಕ ಅಪರಾಧ ಮತ್ತು ಮಾದಕ ದ್ರವ್ಯ (ಇ ಆಂಡ್ ಎನ್) ಪೊಲೀಸ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದು, ಅವರಿಂದ 1 ಕೆ.ಜಿ. 796 ಗ್ರಾಂ ಗಾಂಜಾ, 1 ದ್ವಿಚಕ್ರ ವಾಹನ ಹಾಗೂ 1 ಮೊಬೈಲ್ ವಶಪಡಿಸಿಕೊಂಡಿದ್ದಾರೆ.

    ವಿಶ್ವನಾಥ ಕರಡಿಗುಡ್ಡ (35) ಹಾಗೂ ನರೇಶಕುಮಾರ ನಾಯಕಂಟಿ (26) ಬಂಧಿತ ಆರೋಪಿಗಳು.

    ಬ್ಯಾಗ್​ನಲ್ಲಿ ಗಾಂಜಾ ತೆಗೆದುಕೊಂಡು ಸ್ಕೂಟಿ ಮೇಲೆ ಧಾರವಾಡದಿಂದ ಹಳೇಹುಬ್ಬಳ್ಳಿ ಕಡೆಗೆ ಹೊರಟಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

    ಉಪನಗರ ಠಾಣೆ ಪೊಲೀಸರು ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿದ ಮರುದಿನವೇ ಇ ಆಂಡ್ ಎನ್ ಠಾಣೆ ಪೊಲೀಸರು ಮತ್ತಿಬ್ಬರನ್ನು ಬಂಧಿಸಿದ್ದಾರೆ. ಜಾಲದಲ್ಲಿ ಇನ್ನೂ ಹಲವು ಭಾರಿ ಕುಳಗಳಿದ್ದು, ಪೊಲೀಸರು ಅವರನ್ನೂ ಭೇದಿಸಬೇಕಿದೆ.

    ಕುಖ್ಯಾತ ವಿಶ್ವನಾಥ: ವಿಶ್ವನಾಥ ಕರಡಿಗುಡ್ಡ ವಿರುದ್ಧ ಹು-ಧಾ ಸೇರಿ ಇತರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಸುಲಿಗೆ, ದರೋಡೆ, ಸರಗಳ್ಳತನ, ಗಾಂಜಾ ಮಾರಾಟ ಸೇರಿ ಹಲವು ಅಪರಾಧ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷವಷ್ಟೇ ಸರಗಳ್ಳತನ ಆರೋಪದಡಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರ ಬಂದಿದ್ದ ಆತ ಗಾಂಜಾ ಮಾರಾಟದಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts