More

    ಬಡವರಿಗೆ ದಾನ ಮಾಡಿ

    ಕೆ.ಆರ್.ನಗರ: ರಂಜಾನ್ ಹಬ್ಬದ ಸಮಯದಲ್ಲಿ ಮುಸ್ಲಿಮರು ಕಠಿಣ ಉಪವಾಸ ಮಾಡುವುದರ ಜತೆಗೆ ಸಂಪಾದನೆಯ ಅಲ್ಪ ಭಾಗವನ್ನು ಬಡವರಿಗೆ ದಾನ ಮಾಡುವಂತೆ ಮುಸ್ಲಿಮರಿಗೆ ಖ್ಯಾತ ಮೂಳೆ ತಜ್ಞ ಡಾ.ಮೆಹಬೂಬ್‌ಖಾನ್ ಸಲಹೆ ನೀಡಿದರು.


    ಪಟ್ಟಣದ ಮುಸ್ಲಿಂ ಬಡಾವಣೆಯಲ್ಲಿ ಶನಿವಾರ ರಂಜಾನ್ ಅಂಗವಾಗಿ ಮುಸ್ಲಿಮರಿಗೆ ವೈಯಕ್ತಿಕವಾಗಿ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದ ಅವರು, ಇಂತಹ ಉತ್ತಮ ಕೆಲಸ ಮಾಡುವುದರಿಂದ ಬದುಕು ಸಾರ್ಥಕವಾಗಲಿದೆ ಎಂದರು.


    ಕಳೆದ 35 ವರ್ಷಗಳಿಂದ ಈ ಸಮಾಜ ಸೇವಾ ಕಾರ್ಯ ಮಾಡಿಕೊಂಡು ಬರುತ್ತಿದ್ದು, ಇದನ್ನು ನಿರಂತರವಾಗಿ ಮಾಡುವುದರ ಜತೆಗೆ ನನ್ನ ನಂತರದ ದಿನಗಳಲ್ಲಿ ನನ್ನ ಮಕ್ಕಳು ಮುಂದುವರಿಸಿಕೊಂಡು ಹೋಗುವಂತೆ ಹೇಳಿದ್ದೇನೆ. ಉಳ್ಳವರು ಬಡವರ ನೆರವಿಗೆ ಧಾವಿಸುವುದು ಅತ್ಯಂತ ಪುಣ್ಯದ ಕಾರ್ಯವೆಂದು ತಿಳಿಸಿದರು.


    800 ಮುಸ್ಲಿಮರಿಗೆ ಅಕ್ಕಿ ಸೇರಿದಂತೆ ಇತರ ಆಹಾರ ಪದಾರ್ಥಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಪುರಸಭೆ ಮಾಜಿ ಸದಸ್ಯ ಸೈಯದ್ ಅಸ್ಲಾಂ, ಮುಖಂಡರಾದ ವಸೀಂ, ಏಜಾಸ್, ಶಕೀರ್, ಸನಾ, ಎಂಜಾಸ್, ಇಸ್ಮಾಯಿಲ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts