More

    ಧ್ರುವನಾರಾಯಣ, ಮಲೆಯೂರು ಗುರುಸ್ವಾಮಿಗೆ ಶ್ರದ್ಧಾಂಜಲಿ

    ಕೊಳ್ಳೇಗಾಲ: ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹಾಗೂ ಹಿರಿಯ ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ ನಿಧನದ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದ ಗುರುಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಇಬ್ಬರ ನಿಧನದಿಂದ ಜಿಲ್ಲೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಪ್ರಾರ್ಥಿಸಿದರು. ಕಸಾಪ ತಾಲೂಕು ಅಧ್ಯಕ್ಷ ಕೊಂಗರಹಳ್ಳಿ ನಾಗರಾಜು, ಕಾರ್ಯದರ್ಶಿ ಸಿ.ನಾಗರಾಜು, ಸದಸ್ಯ ಶಾಂತಮೂರ್ತಿ, ಶಿವಸ್ವಾಮಿ, ಸಾಹಿತಿ ಹಿಂದ್ವಾಡಿ ಶಿವಣ್ಣ, ಪುಟ್ಟ ಅರಸಶೆಟ್ಟಿ, ಗಾಯಕ ಮಾಂಬಳ್ಳಿ ಅರುಣ್, ಬಿ.ಕೆ ಪ್ರಕಾಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಗ್ಸಾಂಡರ್, ಮುಖಂಡ ಹೊನ್ನಪ್ಪ, ಡಾ.ಲೋಕೇಶ್, ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶಿವಕುಮಾರಮೂರ್ತಿ, ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts