ಗಜೇಂದ್ರಗಡ: ಮಾನವ ಜನ್ಮದ ಸಾರ್ಥಕತೆಗೆ ಪರಂಪರೆ, ಸಂಸ್ಕಾರ ಹಾಗೂ ಧರ್ಮದ ಪುನರುತ್ಥಾನಕ್ಕೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು ಹೇಳಿದರು.
ಸಮೀಪದ ಸೂಡಿ ಗ್ರಾಮದ ಜುಕ್ತಿಹಿರೇಮಠದ ಲಿಂ. ಗುರು ಉಮಾಪತಿ ಶಿವಾಚಾರ್ಯರ 73ನೇ ಪುಣ್ಯಾರಾಧನೆ ಹಾಗೂ ಸರಳ ಜಾತ್ರಾ ಮಹೋತ್ಸವಕ್ಕೆ ಗುರುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ಕರೊನಾ ವೈರಸ್ನಿಂದಾಗಿ ಮನೆ ಬಿಟ್ಟು ಬಾರದ ದುಸ್ಥಿತಿ ನಿರ್ವಣವಾಗಿದೆ. ಹಬ್ಬ-ಜಾತ್ರೆಗಳನ್ನು ಸರಳವಾಗಿ ಆಚರಿಸಬೇಕಾಗಿರುವುದು ನೋವಿನ ಸಂಗತಿ. ಬರಗಾಲ ಹಾಗೂ ಅತಿವೃಷ್ಟಿಯ ಸಂದರ್ಭದಲ್ಲಿ ಭಕ್ತರು ಕುಗ್ಗಿರಲಿಲ್ಲ. ಜಗತ್ತಿಗೆ ಎದುರಾಗಿರುವ ಕಂಟಕ ದೂರವಾಗಲಿ ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸೋಣ ಎಂದರು.