More

    ದಸರಾ ಕ್ರೀಡಾಕೂಟ ಫಲಿತಾಂಶ-ರಿಲೇನಲ್ಲಿ ತಾಸೀನ್ ಗುಂಪಿಗೆ ಗೆಲುವು

    ದಾವಣಗೆರೆ: ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾದ ದಸರಾ ಕ್ರೀಡಾಕೂಟದ ಮೊದಲ ದಿನ ಅಥ್ಲೆಟಿಕ್ ಕ್ರೀಡೆಗಳು ನಡೆದವು.
    ಪುರುಷರ ವಿಭಾಗದ ಅಥ್ಲೆಟಿಕ್ಸ್‌ನಲ್ಲಿ 4-100 ಮೀ. ರಿಲೇನಲ್ಲಿ ದಾವಣಗೆರೆಯ ಮಹಮ್ಮದ್ ತಾಸೀನ್, ಗಗನ್, ಶರತ್, ವೇಣುಗೋಪಾಲ್ ತಂಡ ಪ್ರಥಮ ಬಹುಮಾನ ಪಡೆದರೆ ಹೊನ್ನಾಳಿಯ ಎ.ಪ್ರಜ್ವಲ್, ಸಚಿನ್, ಎಚ್.ಆರ್.ಮಂಜುನಾಥ್, ಶಿವಕುಮಾರ್ ಗುಂಪು ದ್ವಿತೀಯ ಬಹುಮಾನ ಪಡೆಯಿತು.
    4-400 ಮೀ. ರಿಲೇನಲ್ಲೂ ಮಹಮ್ಮದ್ ತಾಸೀನ್ ತಂಡ ಪ್ರಥಮ ಸ್ಥಾನ ಖಾತ್ರಿಪಡಿಸಿಕೊಂಡಿತು. ಹರಿಹರದ ಎಚ್.ಎಸ್. ಅರುಣ್‌ಕುಮಾರ್, ಭುವನ ಎಸ್. ಜಾಧವ್, ಎಂ. ರಮೇಶ್, ಆರ್.ಬಿ. ಸಂಜೀವ ಗುಂಪು ದ್ವಿತೀಯ ಬಹುಮಾನಕ್ಕೆ ಪಾತ್ರವಾಯಿತು.
    800 ಮೀ. ಓಟ: ಯು.ಎಸ್.ಪ್ರಜ್ವಲ್, ಎಂ.ಆರ್. ಕಿರಣ್, 1500 ಮೀ. ಓಟ; ಎಂ.ರಮೇಶ್, ಎಚ್.ಎಸ್.ಅರುಣ್‌ಕುಮಾರ್, 5 ಸಾವಿರ ಮೀ. ಓಟ; ಕೃಷ್ಣಪ್ಪ, ಭವಾನಿರಾವ್, 10 ಸಾವಿರ ಮೀ. ಓಟ: ಎಂ.ಸಂತೋಷ್, ಎಚ್. ಅಜಯ್,
    ಉದ್ದ ಜಿಗಿತ: ವಿಲೇಶ್ ಕಿರಣ್ ಪಾಟೀಲ್, ಟಿ.ಕೀರ್ತಿ, ಎತ್ತರ ಜಿಗಿತ: ಎಚ್.ಎಂ. ಗಗನ್, ಕೆ.ಎಚ್.ಯೋಗೇಶ್, ಗುಂಡು ಎಸೆತ: ಎನ್.ವಿಜಯ್, ಎಂ. ಶಂಕರ್, ಟ್ರಿಪಲ್ ಜಂಪ್: ಎ.ಎಸ್.ರಘು, ಬಿ.ಎಚ್.ಪ್ರವೀಣ್, ಜಾವೆಲಿನ್ ಎಸೆತ: ಟಿ. ವಸಂತಕುಮಾರ್, ಸತೀಶನಾಯ್ಕ, ಚಕ್ರ ಎಸೆತ: ವಿ.ಮಧುಬಾಬು, ಕೆ.ಎಸ್.ಸತೀಶ್‌ನಾಯ್ಕ. 110 ಮೀ. ಹರ್ಡಲ್ಸ್: ಎಚ್.ಎಲ್.ಚಂದ್ರು, ಮಲ್ಲಿಕಾರ್ಜುನ,
    ಮಹಿಳಾ ವಿಭಾಗದ ವಿಜೇತರು
    800 ಮೀ. ಓಟ: ಕೀರ್ತಿ ಹೊಸಮನೆ, ನಿಶ್ಚಿತಾ ಪಾಟೀಲ್, 1500 ಮೀ. ಹಾಗೂ 3000 ಓಟ: ಕೀರ್ತಿ ಹೊಸಮನೆ, ಪಿ.ಕೆ. ಅನುಷಾ, ಉದ್ದ ಜಿಗಿತ: ಎಸ್. ಅಫೀಪಾ ಕೌನೈನ್, ಚಿತ್ರಲೇಖನ, ಎತ್ತರ ಜಿಗಿತ: ವಸಂತಲಕ್ಷ್ಮೀ ಹಿರೇಮಠ, ಕೆ.ಆರ್.ಸಿರಿ, ಗುಂಡು ಎಸೆತ: ಪಿ.ಸುನೀತಾ, ಕೆ.ಆರ್.ನಂದಿನಿ, ಟ್ರಿಪಲ್ ಜಂಪ್: ಕೆ.ಆರ್.ಸಿರಿ, ಚೈತ್ರಾ ಗಂಗನರಸಿ, ಜಾವೆಲಿನ್ ಎಸೆತ: ಪಿ.ಎಚ್.ರೇಖಾ, ಸಿ.ಪೂಜಿತಾ, ಚಕ್ರ ಎಸೆತ: ಪಿ.ಸುನೀತಾ, ಎಚ್.ಬಿ.ಪ್ರೀತಿ.
    4-100 ಮೀ ರಿಲೇ: ಹರಿಹರದ ಜಿ.ಕೆ. ತನುಶ್ರೀ, ಎನ್.ಬಿ.ಪ್ರೇರಣಾ, ಬಿ.ಎನ್.ಅಸ್ಮಿತಾ, ಎನ್.ಬಿ.ಸುಹಾಸಿನಿ ಗುಂಪು ಪ್ರಥಮ, ಚನ್ನಗಿರಿಯ ಕೀರ್ತಿ ಹೊಸಮನೆ, ಕಾಂಚನಾ ತಳವಾರ, ಜಿ.ಪಿ.ಗೌರಿ, ಎಚ್.ಆರ್.ಅಕ್ಷರಿ ಗುಂಪು ದ್ವಿತೀಯ ಬಹುಮಾನ,

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts