More

    ತೋಂಟದಾರ್ಯ ಜಾತ್ರೆಗಿದೆ ವೈಚಾರಿಕ ನೆಲೆಗಟ್ಟು

    ಗದಗ: ನಾಡಿನ ಜಾತ್ರೆಗಳಲ್ಲೇ ತೋಂಟದಾರ್ಯ ಮಠದ ಜಾತ್ರೆಯು ವೈಚಾರಿಕ ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಡೆಯುವ ಅಪರೂಪದ ಜಾತ್ರೆಯಾಗಿದೆ. ಆಧುನಿಕ ದಿನಮಾನಕ್ಕೆ ತಕ್ಕಂತೆ ಇದಕ್ಕೆ ವೈಚಾರಿಕ ಅಡಿಗಲ್ಲು ಹಾಕಿ ಘನತೆ ತಂದವರು ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.

    ನಗರದ ತೋಂಟದಾರ್ಯ ಕಲ್ಯಾಣಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ 2019ನೇ ಸಾಲಿನ ತೋಂಟದಾರ್ಯ ಜಾತ್ರಾ ಮಹಾಪ್ರಸಾದ ಹಾಗೂ 2020ನೇ ಸಾಲಿನ ಜಾತ್ರಾ ಮಹೋತ್ಸವದ ಪದಾಧಿಕಾರಿಗಳ ಆಯ್ಕೆಯ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಜಾತ್ರೆಗಳು ವಿಧಾಯಕ ಮತ್ತು ಮೌಲ್ಯಯುತವಾಗಿ ನಡೆಯಬೇಕೆಂದು ನಾಡಿಗೆ ತೋರಿಸಿಕೊಟ್ಟವರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಈ ವರ್ಷದ ಜಾತ್ರೆಯನ್ನು ಜನೋತ್ಸವವನ್ನಾಗಿ ಆಚರಿಸಬೇಕು ಎಂದರು.

    ಜನರಲ್ಲಿ ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಮನೋಭಾವ ಮೈದಳೆದಾಗ ಸಮಾಜದಲ್ಲಿನ ಅಂಧಶ್ರದ್ಧೆಗಳು ದೂರಾಗಿ ಸ್ವಸ್ಥ ಸಮಾಜ ನಮ್ಮದಾಗುತ್ತದೆ. ಈ ಹಿನ್ನೆಲೆಯಲ್ಲಿ ಜಾತ್ರೆಗಳು ಕೇವಲ ಧಾರ್ವಿುಕ ಚೌಕಟ್ಟಿನಲ್ಲಿ ಸಿಲುಕದೆ, ಟೊಳ್ಳು ಸಂಪ್ರದಾಯ-ಮೂಢನಂಬಿಕೆಗಳನ್ನು ಬಿತ್ತುವ ಕೇಂದ್ರಗಲಾಗದೆ ಸಮಾಜಮುಖಿಯಾಗಬೇಕು ಎಂದರು.

    ಕಳೆದ ಸಾಲಿನ ಜಾತ್ರಾ ಸಮಿತಿ ಅಧ್ಯಕ್ಷ ಡಾ.ಎಂ.ಬಿ. ನಿಂಬಣ್ಣವರ ಮಾತನಾಡಿ, ಮೂಢನಂಬಿಕೆ-ಕಂದಾಚಾರಗಳನ್ನು ಬದಿಗೊತ್ತಿ ಭಾವೈಕ್ಯತೆ-ಸಹಿಷ್ಣುತೆ ಸಾರುವ ತೋಂಟದಾರ್ಯ ಜಾತ್ರಾ ಮಹೋತ್ಸವವು ಇತರ ಜಾತ್ರೆಗಳಿಗೆ ಮಾದರಿಯಾಗಿದೆ. ಇಂಥ ಅಮೂಲ್ಯ ಜಾತ್ರೆಯ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ನನ್ನ ಭಾಗದ ಅದೃಷ್ಟವಾಗಿದೆ. ಕೇವಲ ಅಧ್ಯಕ್ಷ ಸ್ಥಾನದ ಜವಾಬ್ದಾರಿಯಿಂದ ವಿಮುಖನಾಗುತ್ತಿದ್ದೇನೆ ಹೊರತು ಶ್ರೀಮಠದೊಂದಿಗೆ ಭಾಂದವ್ಯ ಎಂದಿನಂತೆ ಮುಂದುವರಿಯುತ್ತದೆ ಎಂದು ಹೇಳಿದರು.

    ಜಿ.ಪಂ ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ, ವಾಸಣ್ಣ ಕುರಡಗಿ, ದಾನಪ್ಪ ತಡಸದ, ಎಸ್.ಟಿ.ಪಾಟೀಲ, ಗಂಗಣ್ಣ ಕೋಟಿ ಉಪಸ್ಥಿತರಿದ್ದರು. ಕಳೆದ ವರ್ಷದ ಜಾತ್ರೆಯ ಲೆಕ್ಕಪತ್ರವನ್ನು ಈರಣ್ಣ ಬಾಳಿಕಾಯಿ ಮಂಡಿಸಿದರು. ಮಲ್ಲಿಕಾರ್ಜುನ ಐಲಿ ನಿರೂಪಿಸಿದರು. ಲಿಂಗಾಯತ ಪ್ರಗತಿಶೀಲ ಸಂಘ, ಬಸವದಳ-ಬಸವಕೇಂದ್ರದ, ಗದಗ-ಬೆಟಗೇರಿ ವಿವಿಧ ಪ್ರಗತಿ ಪರ ಸಂಘಟನೆಗಳ ಮುಖ್ಯಸ್ಥರು, ಸದಸ್ಯರು, ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

    ನೂತನ ಪದಾಧಿಕಾರಿಗಳ ಆಯ್ಕೆ: ಜಾತ್ರಾ ಮಹೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಅಮರೇಶ ಅಂಗಡಿ, ಉಪಾಧ್ಯಕ್ಷರಾಗಿ ದಾನಯ್ಯ ಗಣಾಚಾರಿ, ಮೈಲಾರಪ್ಪ ಅರಣಿ, ಬಸವರಾಜ ಹಿರೇಹಡಗಲಿ, ಶಿವಲೀಲಾ ಅಕ್ಕಿ, ಕಾರ್ಯದರ್ಶಿಯಾಗಿ ಕೊಟ್ರೇಶ ಮೆಣಸಿನಕಾಯಿ, ಸಂಘಟನಾ ಕಾರ್ಯದರ್ಶಿಯಾಗಿ ಅಶೋಕ ಕುಡತಿನಿ, ಕಿರಣ ತಿಪ್ಪಣ್ಣವರ, ಸಹಕಾರ್ಯದರ್ಶಿಯಾಗಿ ಚಂದ್ರು ಚವ್ಹಾಣ, ಮಲ್ಲಿಕಾರ್ಜುನ ಚಂದಪ್ಪನವರ, ಕೋಶಾಧ್ಯಕ್ಷರಾಗಿ ವೀರಣ್ಣ ಜ್ಯೋತಿ, ಸಹಕೋಶಾಧ್ಯಕ್ಷರಾಗಿ ಸುರೇಶ ಮರಳಪ್ಪನವರ ಅವರನ್ನು ಆಯ್ಕೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts