ಚಿತ್ರದುರ್ಗ:ಹಿರಿಯೂರು ತಾಲೂಕು ಕೆಆರ್ ಹಳ್ಳಿ ಗೇಟ್ ಬಳಿ ಗುರುವಾರ ಬೆಳಗ್ಗೆ ಟ್ರಾೃಕ್ಟರ್ ಪಲ್ಟಿ ಹೊಡೆದು,ಅದರಲ್ಲಿ ಪ್ರಯಾಣಿಸುತ್ತಿದ್ದ ಒಬ್ಬರು ಮೃತಪಟ್ಟಿದ್ದು,ಎಂಟು ಮಂದಿ ಗಾಯಗೊಂಡಿದ್ದಾರೆ. ಅಡಕೆ ಕೊಯ್ಲಿಗೆಂದು ಶಿರಾದಿಂದ ಹಿರಿಯೂರು ಕಡೆಗೆ ಬರುತ್ತಿದ್ದ ಕಾ ರ್ಮಿಕರಿದ್ದ ಈ ಟ್ರಾೃಕ್ಟರ್ ಪಲ್ಟಿ ಹೊಡೆದು ದುರ್ಘಟನೆ ನಡೆದಿದೆ. ಹಿರಿಯೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.