More

    ಟೋಪೋಜಿ ಸೇವೆ ಅನುಕರಣೀಯ

    ಟೋಪೋಜಿ, ಸೇವೆ, ಅನುಕರಣೀಯ, ಮುನವಳ್ಳಿ, ಬೆಳಗಾವಿ, Topoji, service, exemplary, munavalli, Belagavi


    ಮುನವಳ್ಳಿ: ಡಿ.ಡಿ.ಟೋಪೋಜಿ ಅವರು ಫಲಾಪೇಕ್ಷೆಯಿಲ್ಲದೆ ಜನಸೇವೆ ಮಾಡುತ್ತಿದ್ದಾರೆ. ಹೋರಾಟದ ಮೂಲಕ ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪಂಚನಗೌಡ ದ್ಯಾಮನಗೌಡರ ಶ್ಲಾಘಿಸಿದರು.

    ಸವದತ್ತಿ ತಾಲೂಕಿನ ರಾಜಕೀಯ ಮುಖಂಡ, ಯರಗಟ್ಟಿ-ಮುನವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ.ಟೋಪೋಜಿ ಅವರ 39ನೇ ಜನ್ಮದಿನ ಆಚರಣೆ ಅಂಗವಾಗಿ ಭಾನುವಾರ ಶಿಂದೋಗಿಯಲ್ಲಿ ಜರುಗಿದ ಶಾಲಾ ವಿದ್ಯಾರ್ಥಿಗಳಿಗೆ 400 ಫೈಲ್ ವಿತರಣೆ ಹಾಗೂ ವಿವಿಧ ರಂಗಗಳಲ್ಲಿ ಸೇವೆಗೈದ ಮಹನೀಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕೀಯವಾಗಿ ಹೆಚ್ಚು ಬೆಳೆಯಲಿ, ಹೆಚ್ಚಿನ ಸ್ಥಾನ ಮಾನಗಳು ಸಿಗಲಿ. ಮುಂಬರುವ ಜಿಪಂ ಚುನಾವಣೆಯಲ್ಲಿ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು. ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಮಾತನಾಡಿ, ಸಮಾಜ ಸೇವೆ ಮಾಡುವ ತುಡಿತ ಹೊಂದಿರುವ ಟೋಪೋಜಿ ಅವರು ಮುಂದಿನ ದಿನಮಾನಗಳಲ್ಲಿ ಒಬ್ಬ ಉತ್ತಮ ನಾಯಕನಾಗಿ ಬೆಳೆದು ಸಮಾಜ ಸೇವೆಗೈಯಲಿ ಎಂದು ಹಾರೈಸಿದರು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿ.ಡಿ.ಟೋಪೋಜಿ, ಅಧಿಕಾರ ಇರಲಿ ಅಥವಾ ಇರದೇ ಇರಲಿ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಪರಿಹರಿಸಲು ಕೈಲಾದ ಮಟ್ಟಿಗೆ ಸಹಾಯ ಮಾಡುತ್ತ ಬಂದಿದ್ದೇನೆ. ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯ ಕೈಗೊಳ್ಳಲು ತಮ್ಮೆಲ್ಲರ ಸಹಕಾರ ಸದಾ ಇರಲಿ ಎಂದರು.

    ವೇದಮೂರ್ತಿ ಮಡಿವಾಳಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಂಬರೀಷ ಯಲಿಗಾರ, ಜಿಪಂ ಮಾಜಿ ಸದಸ್ಯ ಫಕೀರಪ್ಪ ಹದ್ದಣ್ಣವರ, ಫಕೀರಪ್ಪ ಚಂದರಗಿ, ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವಣ್ಣವರ, ಶಿಂದೋಗಿ ಗ್ರಾಪಂ ಅಧ್ಯಕ್ಷೆ ಮಾಯವ್ವ ಟೋಪೋಜಿ, ಉಪಾಧ್ಯಕ್ಷೆ ಬಸವರಾಜ ಮಾಯಪ್ಪನವರ, ಸದಸ್ಯರಾದ ಮಲ್ಲಿಕಾರ್ಜುನ ದಸ್ತಿ, ಫಕೀರಪ್ಪ ಮಾದರ, ಮುಶೆಪ್ಪ ಮುಶೆಣ್ಣವರ, ಶಕುಂತಲಾ ಬಂಡಿವಡ್ಡರ, ಗುಡುಮಾ ಶೆರೆಗಾರ, ದೂಧಪ್ಪ ಟೋಪೋಜಿ, ರಾಜು ಅಡವಿ, ನಿಂಗಪ್ಪ ಟೋಪೋಜಿ, ರಮೇಶ ಕೊಡ್ಲಿವಾಡ, ಮಲ್ಲಪ್ಪ ಕೊಳ್ಳಿ, ಯಶವಂತ ಯಲಿಗಾರ, ಈರಪ್ಪ ಕಣವಿ, ನಾಗಪ್ಪ ಹಟ್ಟಿ, ಕೃಷ್ಣ ಗುದಗೊಪ್ಪ, ಗೋಪಾಲ ದಳವಾಯಿ, ಮಂಜುನಾಥ ಬೆಹರೆ ಇತರರು ಇದ್ದರು. ಎ.ವಿ.ನರಗುಂದ ನಿರೂಪಿಸಿದರು. ಎಫ್.ವೈ.ಮುಶೆಣ್ಣವರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts