More

    ಜಗನ್ಮೋಹನರೆಡ್ಡಿ ನಿವಾಸಕ್ಕೆ ಸಂಸದ ಭೇಟಿ, ಹತ್ಯೆಯಾದ ಸ್ಥಳ ಪರಿಶೀಲನೆ, ರೆಡ್ಡಿ ಕುಟುಂಬಕ್ಕೆ ಸಾಂತ್ವನ

    ಮುಳಬಾಗಿಲು: ನಗರದ ಮುತ್ಯಾಲಪೇಟೆಯ ಗಂಗಮ್ಮ ಗುಡಿ ದೇವಾಲಯದ ಬಳಿ ಮಂಗಳವಾರ ಬೆಳಗ್ಗೆ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷ ಜಗನ್​ಮೋಹನ್​ರೆಡ್ಡಿ ಹತ್ಯೆಯಾದ ಸ್ಥಳವನ್ನು ಸಂಸದ ಎಸ್​.ಮುನಿಸ್ವಾಮಿ ಬುಧವಾರ ಭೇಟಿ ನೀಡಿ ಪರಿಶೀಲಿಸಿ, ನಂತರ ನಿವಾಸಕ್ಕೆ ತೆರಳಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

    ಜಗನ್​ಮೋಹನರೆಡ್ಡಿ ಪತ್ನಿ ನಿರೂಪಮ, ಪುತ್ರಿ ಡಾ.ಜೆ.ಸುಶ್ಮಿತಾ, ಪುತ್ರ ಜೆ.ಮಿಥುನ್​ಸಾಯಿಗೌಡ ಅವರಿಗೆ ಧೈರ್ಯ ತುಂಬಿ ಮಾತನಾಡಿದರು.

    ಹಂತಕರು ಅಟ್ಟಹಾಸ ಮೆರೆದಿದ್ದು, ಪೊಲೀಸರು ಅವರನ್ನು ಎಡೆಮುಡಿ ಕಟ್ಟಿ ಶಿಕ್ಷೆಗೆ ಒಳಪಡಿಸಲಿದ್ದಾರೆ. ಎಷ್ಟೇ ಪ್ರಭಾವಿಗಳಾದರೂ ಪ್ರಕರಣದಲ್ಲಿ ಪರೋಕ್ಷವಾಗಿ ಹಾಗೂ ಪ್ರತ್ಯಕ್ಷವಾಗಿ ಭಾಗಿಯಾಗಿರುವವರನ್ನು ಬಿಡುವ ಪ್ರಶ್ನೆಯೇ ಇಲ್ಲ. ಈ ಕುರಿತು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದರು.

    ನಗರಸಭೆ ಸದಸ್ಯ ಎಂ.ಪ್ರಸಾದ್​, ಕೊತ್ತೂರು ಜಿ.ಮಂಜುನಾಥ್​ ಅಭಿಮಾನಿ ಬಳಗದ ಮುಖಂಡರಾದ ಕಾರ್​ ವಿ.ಶ್ರೀನಿವಾಸ್​, ಕೆ.ವಿ.ರಾಜು, ಬಿಜೆಪಿ ಗ್ರಾಮಾಂತರ ಮಂಡಳಿ ಅಧ್ಯಕ್ಷ ಬಿ.ಕೆ.ಅಶೋಕ್​, ಪ್ರಧಾನ ಕಾರ್ಯದರ್ಶಿ ನಂಗಲಿ ವಿಶ್ವನಾಥರೆಡ್ಡಿ, ನಗರ ಮಂಡಲ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್​, ಪ್ರಧಾನ ಕಾರ್ಯದರ್ಶಿ ಮೈಕ್​ ವಿ.ಟಿ.ಶಂಕರ, ಮುಖಂಡರಾದ ಸೀಗೇನಹಳ್ಳಿ ಸುಂದರ್​, ಹೆಬ್ಬಣಿ ರವಿ, ಯುವಮೋರ್ಚಾ ಅಧ್ಯಕ್ಷ ಉತ್ತನೂರು ಎಸ್​.ಪ್ರಕಾಶರೆಡ್ಡಿ, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಗರಡಿ ಆರ್​.ಕಿರಣ್​ ಕುಮಾರ್​ ಸೇರಿ ಹಲವು ಬಿಜೆಪಿ ಮುಖಂಡರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts