More

    ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿತು ಅನಾಹುತ

    ಮುಂಡರಗಿ: ಬ್ರೇಕ್​ನಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಅನಾಹುತ ಸಂಭವಿಸುವ ಮುನ್ಸೂಚನೆ ಅರಿತ ಬಸ್ ಚಾಲಕನೊಬ್ಬ ತನ್ನ ಸಮಯ ಪ್ರಜ್ಞೆ ಯಿಂದ ಅವಗಢ ತಪ್ಪಿಸಿದ ಘಟನೆ ತಾಲೂಕಿನ ಕಲಕೇರಿ-ಬಾಗೇವಾಡಿ ಮಾರ್ಗ ಮಧ್ಯೆ ಗುರುವಾರ ಬೆಳಗ್ಗೆ ಸಂಭವಿಸಿದೆ.

    ಸ್ಥಳೀಯ ಸಾರಿಗೆ ಸಂಸ್ಥೆ ಘಟಕದ ಬಸ್ ಶಿರಹಟ್ಟಿಯಿಂದ ಮುಂಡರಗಿಗೆ ಬರುತ್ತಿತ್ತು. ಆಗ ಬ್ರೇಕ್​ನ ಪೈಪ್​ಗೆ ಏರ್​ಸಪ್ಲೈ ಲೀಕೇಜ್ ಆಗಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ಸಿದ್ದಪ್ಪ ಗೊಡ್ಡೆಮ್ಮಿ ಅವರು ರಸ್ತೆ ಬದಿಯಲ್ಲಿನ ಗುಡ್ಡಕ್ಕೆ ಬಸ್ ಏರಿಸಿ ನಿಲ್ಲಿಸಿದ್ದಾರೆ. ತಕ್ಷಣವೇ ಬಸ್​ನಲ್ಲಿದ್ದ 18 ಪ್ರಯಾಣಿಕರು ಕೆಳಗಿಳಿದಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಪಟ್ಟಣದ ಕೆಎಸ್​ಆರ್​ಟಿಸಿ ಘಟಕದ ವ್ಯವಸ್ಥಾಪಕ ವಿಜಯಕುಮಾರ ಕುಮಟಳ್ಳಿ ಅವರು, ಚಾಲಕನ ಎಚ್ಚರಿಕೆಯಿಂದ ಸಂಭಾವ್ಯ ಅನಾಹುತ ತಪ್ಪಿದೆ. ಪ್ರಯಾಣಿಕರಿಗೆ ಹಾಗೂ ಬಸ್​ಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts