ಮುಂಡರಗಿ: ಬ್ರೇಕ್ನಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಅನಾಹುತ ಸಂಭವಿಸುವ ಮುನ್ಸೂಚನೆ ಅರಿತ ಬಸ್ ಚಾಲಕನೊಬ್ಬ ತನ್ನ ಸಮಯ ಪ್ರಜ್ಞೆ ಯಿಂದ ಅವಗಢ ತಪ್ಪಿಸಿದ ಘಟನೆ ತಾಲೂಕಿನ ಕಲಕೇರಿ-ಬಾಗೇವಾಡಿ ಮಾರ್ಗ ಮಧ್ಯೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಸ್ಥಳೀಯ ಸಾರಿಗೆ ಸಂಸ್ಥೆ ಘಟಕದ ಬಸ್ ಶಿರಹಟ್ಟಿಯಿಂದ ಮುಂಡರಗಿಗೆ ಬರುತ್ತಿತ್ತು. ಆಗ ಬ್ರೇಕ್ನ ಪೈಪ್ಗೆ ಏರ್ಸಪ್ಲೈ ಲೀಕೇಜ್ ಆಗಿದೆ. ಇದರಿಂದ ಎಚ್ಚೆತ್ತುಕೊಂಡ ಚಾಲಕ ಸಿದ್ದಪ್ಪ ಗೊಡ್ಡೆಮ್ಮಿ ಅವರು ರಸ್ತೆ ಬದಿಯಲ್ಲಿನ ಗುಡ್ಡಕ್ಕೆ ಬಸ್ ಏರಿಸಿ ನಿಲ್ಲಿಸಿದ್ದಾರೆ. ತಕ್ಷಣವೇ ಬಸ್ನಲ್ಲಿದ್ದ 18 ಪ್ರಯಾಣಿಕರು ಕೆಳಗಿಳಿದಿದ್ದರಿಂದ ಯಾರಿಗೂ ತೊಂದರೆಯಾಗಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಪಟ್ಟಣದ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕ ವಿಜಯಕುಮಾರ ಕುಮಟಳ್ಳಿ ಅವರು, ಚಾಲಕನ ಎಚ್ಚರಿಕೆಯಿಂದ ಸಂಭಾವ್ಯ ಅನಾಹುತ ತಪ್ಪಿದೆ. ಪ್ರಯಾಣಿಕರಿಗೆ ಹಾಗೂ ಬಸ್ಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ತಿಳಿಸಿದರು.