ಹುಬ್ಬಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಗ್ರೋ ಗ್ರೀನ್ ಪೆಡ್ಲರ್ಸ್ ವತಿಯಿಂದ ವಿದ್ಯಾನಗರ ಹಾಗೂ ಶಿರೂರ ಪಾರ್ಕ್ ವೃತ್ತದಲ್ಲಿ ಆಟೋ ಚಾಲಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ 150 ಸಸಿಗಳನ್ನು ವಿತರಿಸಲಾಯಿತು. ಸಂಘಟನೆಯ ಅಧ್ಯಕ್ಷ ಬಾಲಚಂದ್ರ ಡಂಗನವರ, ಚಂದ್ರಶೇಖರ ಏರಿಮನಿ, ಸುರೇಶ ಚಿಂದಿ, ರಾಜು ರಾಜೊಳೀ, ಚನ್ನು ದೇವಕ್ಕಿ, ಪ್ರವೀಣ ನಾಯಕ, ಪ್ರವೀಣ ಪಾಟೀಲ, ಅನಿಲ ಜರತಾರಘರ, ಆನಂದ ಮಲ್ಲಾಪುರ, ಇನ್ನಿತರರು ಇದ್ದರು.</