ಗದಗ: ನಕಲಿ ಠರಾವು ಹೊಂದಾಣಿಕೆ, ಟೆಂಡರ್ ಪ್ರಕ್ರಿಯೆ, ಬೀದಿ ದೀಪ ನಿರ್ವಹಣೆ, ತೆರೆಮರೆ ರಾಜಕಾರಣದಲ್ಲಿ ಒಂದಾಗುವ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಗುರುವಾರ ಜರುಗಿದ ಸಾಮಾನ್ಯ ಸಭೆಯ ಬಜೆಟ್ ಮಂಡನೆ ವೇಳೆ ಒಬ್ಬರಿಗೊಬ್ಬರು ದಿಕ್ಕಾರ ಕೂಗಿ ವಿರೋಧ ವ್ಯಕ್ತಪಡಿಸಿದರು.
ಸದಸ್ಯರ ಕೆಸೆರೆರಚಾಟದಲ್ಲಿ ಜನಮರಳೋ ಜಾತ್ರೆ ಮರಳೋ ಎಂಬ ಸನ್ನಿವೇಶ ನಗರಸಭೆ ಪ್ರಾಂಗಣದಲ್ಲಿ ಸೃಷ್ಟಿಯಾಯಿತು. ಬಜೆಟ್ ಮಂಡನೆಗೆ ಬಿಜೆಪಿ ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದರೆ, ಮಂಡನೆಗೆ ವಿರೋಧ ವ್ಯಕ್ತಪಡಿಸಲು ಈ ಮೊದಲೇ ಸಿದ್ಧಗೊಂಡಿದ್ದ ಕಾಂಗ್ರೆಸ್ ಸದಸ್ಯರು ಆಡಳಿತ ಪಕ್ಷದ ಬಜೆಟ್ ವಿರೋಧಿಸಿದರು ಮತ್ತು ಬಜೆಟ್ ಗೆ ಮನ್ನಣೆ ನೀಡಬಾರದು ಎಂದು ಆಗ್ರಹ ವ್ಯಕ್ತಪಡಿಸಿದರು. ಈ ಕೋಲಾಹಲದ ನಡುವೆ ಬಜೆಟ್ ಮಂಜೂರಾತಿಗೆ ಬಹುಮತ ಅಗತ್ಯವೋ ಅಥವಾ ಸರ್ವಾನುಮತ ಅಗತ್ಯವಿದೆಯೇ ಎಂಬ ಹೊಸ ಚರ್ಚೆಯನ್ನು ಕಾಂಗ್ರೆಸ್ ಸದಸ್ಯರು ಹುಟ್ಟುಹಾಕಿದರು.
ನಗರಸಭೆ ಅಧ್ಯಕ್ಷೆ ಉಷಾ ದಾಸರ ಬಜೆಟ್ ಮಂಡನೆಗೆ ಮುಂದಾಗುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷದ ನಾಯಕ ಎಲ್.ಡಿ. ಚಂದಾವರಿ, ಈಗಾಗಲೇ ಪಟ್ಟಿ ಮಾಡಿರುವ 192 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಗೆ ಸೂಚಿಸಿ ಬಜೆಟ್ ಮಂಡನೆ ಮಾಡುವಂತೆ ಆಗ್ರಹಿಸಿ ಸದನದ ಬಾವಿಗಿಳಿದರು. ಕಾಂಗ್ರೆಸ್ ಸದಸ್ಯರೆಲ್ಲರೂ ಸದನದ ಬಾವಿಗಿಳಿದು ಲ್.ಡಿ. ಚಂದಾವರಿ ಅವರನ್ನು ಬೆಂಬಲಿಸಿದರು. ಅಧ್ಯೆ ಉಷಾ ದಾಸರ ಒಂದೆಡೆ ಬಜೆಟ್ ಮಂಡಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್&ಬಿಜೆಪಿ ಸದಸ್ಯರು ಪರಸ್ಪರ ದಿಕ್ಕಾರ ಕೂಗಿ, ಸದನ ಗಾಂಭಿರ್ಯತೆ ಕಳೆದುಕೊಂಡಿತು. ಕೇವಲ 20 ನಿಮಿಷದಲ್ಲಿ ಬಜೆಟ್ ಮಂಡನೆ ರ್ಪೂಣಗೊಂಡಿತು. ತದನಂತರ ಅಧ್ಯೆ ಮತ್ತು ಉಪಾಧ್ಯೆ ಸೇರಿದಂತೆ ಬಿಜೆಪಿ ಸದಸ್ಯರೆಲ್ಲರೂ ಸಭೆಯಿಂದ ಹೊರನಡೆದರು.
ಕಾಂಗ್ರೆಸ್ ಆರೋಪ:
ಸರ್ವಾನುಮತದಿಂದ ಬಜೆಟ್ ಗೆ ಅನುಮೋದನೆ ದೊರೆಯಬೇಕೆ ವಿನಹ ಬಹುಮತದಿಂದಲ್ಲ ಎಂಬುದು ಕಾಂಗ್ರೆಸ್ ಸದಸ್ಯರ ಪ್ರಮುಖ ಆರೋಪವಾಗಿತ್ತು. ಇದು ಕೊರತೆಯ ಬಜೆಟ್ ಆಗಿದೆ. ಕಳೆದ ಬಾರಿಯ ಶಿಲ್ಕು 47 ಕೋಟಿಯನ್ನು ಪ್ರಸಕ್ತ ಸಾಲಿನ ಬಜೆಟ್ ಗೆ ಸೇರಿಸಲಾಗಿದೆ. ಆದಾಯ 125 ಕೋಟಿ, ಖರ್ಚು 169 ಕೋಟಿ ತೋರಿಸಿದ್ದಾರೆ. ಈ ಹಿನ್ನೆಲೆ ಇದೆ ಪ್ರಸಕ್ತ ಸಾಲಿನಲ್ಲಿ 40 ಕೋಟಿಗೂ ಹೆಚ್ಚು ಕೊರತೆ ಕಾಣಿಸುತ್ತಿದೆ. 24/7 ನಿರಂತರ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆ ನಿರ್ವಹಣೆಯನ್ನು ನಗರಸಭೆಗೆ ಹಸ್ತಾಂತರ ಪಡೆದುಕೊಂಡಿದ್ದರೂ ಈ ಎರೆಡೂ ಯೋಜನೆಗೆ ಈ ಬಜೆಟ್ ನಲ್ಲಿ ಹಣವೇ ಮೀಸಲಿಟ್ಟಿಲ್ಲ. ಹಾಗಾಗಿ ಮತ್ತೊಮ್ಮೆ ಪರಮಾರ್ಶೆ ಮಾಡಬೇಕು ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.
ಬಾಕ್ಸ್:
ಬಜೆಟ್ ಮಂಡನೆಗಾಗಿ ನಗರಸಭೆ ಹಾಲ್ಗೆ ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಇದನ್ನು ಟೀಕಿಸಿದ ಪ್ರತಿಪಕ್ಷದ ನಾಯಕ ಎಲ್.ಡಿ. ಚಂದಾವರಿ, ಆಡಳಿತ ಪಕ್ಷ ಕಿವಿಗೆ ಹೂ ಇಡುವ ಬದಲಾಗಿ ಟೆಬಲ್ ಮೇಲೆ ಹೂ ಇಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಹುಮತೋ? ಸರ್ವಾನುಮತವೋ?
ಬಜೆಟ್ ಮಂಜೂರಾತಿಗೆ ಬಹುಮತಕ್ಕಿಂತ ಸರ್ವಾನುಮತದ ಒಪ್ಪಿಗೆ ಅಗತ್ಯವಿದೆ. ಇದು ನಗರಸಭೆ ನಿಯಮದಲ್ಲೇ ಇದೆ. ಈ ನಿಯಮ ಉಲ್ಲಂಸಿ ಮಂಜೂರಾತಿ ನೀಡುವುದು ನಿಯಮ ಬಾಹಿರ ಎಂದು ಕಾಂಗ್ರೆಸ್ ಆರೋಪಿಸಿದೆ. ಕಾಂಗ್ರೆಸ್ಸಿನ ಈ ಹೇಳಿಕೆ ಹಲವು ನಗರಸಭೆ ಸದಸ್ಯರನ್ನು ಗೊಂದಲಕ್ಕೆ ದೂಡಿತು. ಈ ಬಗ್ಗೆ ಸ್ಥಳದಲ್ಲೇ ಅಧಿಕಾರಿಗಳಿಂದ ಸ್ಪಷ್ಟಿಕರಣವನ್ನು ಕೇಳಲಾಯಿತು. ನಗರಸಭೆ ಅಕೌಂಟೆಟ್ ಅವರನ್ನು ವೇದಿಕೆಗೆ ಕರೆದು “ಬಜೆಟ್ ಮಂಜೂರಾತಿಗೆ ಸರ್ವಾನುಮತದ ಒಪ್ಪಿಗೆಯೋ? ಅಥವಾ ಬಹುಮತದ ಆಯ್ಕೆಯೋ? ಎಂಬುದನ್ನು ಪ್ರಶ್ನಿಸಿದರು. ಇದನ್ನು ಕಾನೂನು ವ್ಯಾಪ್ತಿಯ ತನಿಖೆಗೆ ಒಳಪಡಿಸಬೇಕು ಎಂದು ಅಕೌಂಟೆಂಟ್ ಮರುತ್ತರಿಸಿದರು.
ಶಿಷ್ಠಾಚಾರ ಉಲ್ಲಂಘನೆ?
ಬಜೆಂಡ್ ಮಂಡನೆ ನಂತರ ಶಿಷ್ಠಾಚಾರ ಉಲ್ಲಂನೆ ಪ್ರಸಂಗಗಳು ಜರುಗಿದವು. ವೇದಿಕೆ ಮೇಲೆ ಕುಳಿತಿದ್ದ ನಗರಸಭೆ ಪೌರಾಯುಕ್ತರು ಹೊರ ನಡೆಯುತ್ತಿದ್ದಂತೆ ಕೆಲ ಕಾಂಗ್ರೆಸ್ ಸದಸ್ಯರು ಏಕವಚನ ಸಂಭೋದನೆ ಮಾಡಿ ಮರಳಿ ಬಂದು ರ್ಕುಚಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದರಲ್ಲದೇ ಬಜೆಟ್ ಕುರಿತು ನಾನಾ ಪ್ರಶ್ನಾವಳಿಗಳನ್ನು ಕೇಳಿದರು.
ಬಜೆಟ್ ಮಂಡನೆ:
– ನೈರ್ಮಲ್ಯ ಮತ್ತು ಆರೋಗ್ಯಕ್ಕೆ 1.48 ಕೋಟಿ
– ಪಿಂಕ್ ಶೌಚಾಲಯ ನಿರ್ಮಾಣಕ್ಕೆ 25 ಲಕ್ಷ ರೂ.,
– ಮುನ್ಸಿಪಲ್ ಹೈಸ್ಕೂಲ್ ದುರಸ್ಥಿಗೆ 25 ಲಕ್ಷ ರೂ.
– ಫಾರಂ 3 ವಿತರಣೆ ಸರಳೀಕರಣ ಮತ್ತು ಡಿಜಟಲೀಕರಣಕ್ಕಾಗಿ 15 ಲಕ್ಷ ರೂ.,
– ಹೊಸದಾದ ಶವಗಾರ(ಶ್ರದ್ಧಾಂಜಲಿ) ವಾಹನ ಖರೀದಿಗೆ 27 ಲಕ್ಷ ರೂ.,
– ಸ್ಮಶಾನ ಮತ್ತು ಶವಸಂಸ್ಕಾರ ಸ್ಥಳಗಳ ನಿರ್ವಹಣೆಗೆ 25 ಲಕ್ಷ ರೂ.,
– ಈಜುಕೊಳಗಳನ್ನು ರ್ಪೂಣಗೊಳಿಸಲು 70 ಲಕ್ಷ ರೂ.,
– ಈಗಿರುವ ಈಜುಕೊಳಗಳ ನಿರ್ವಹಣೆಗೆ 4 ಲಕ್ಷ ರೂ.,
– ಅವಳಿ ನಗರದಲ್ಲಿ ಹೊಸದಾಗಿ ರಸ್ತೆ ನಿರ್ಮಾಣಕ್ಕೆ 6.20 ಕೋಟಿ ರೂ.
– ರಸ್ತೆ ದುರಸ್ಥಿಗಾಗಿ 63.96 ಲಕ್ಷ ರೂ.
– ಚರಂಡಿ ನಿರ್ವಹಣೆಗೆ 11 ಲಕ್ಷ ರೂ.
– ಹೊಸ ಚರಂಡಿ ನಿಮಿರ್ಸುವುದಕ್ಕಾಗಿ 2.92 ಕೋಟಿ ರೂ.
– ಒಳಚರಂಡಿ ನಿರ್ಮಾಣಕ್ಕಾಗಿ 40 ಲಕ್ಷ ರೂ.
– ಅಮೃತ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯಡಿ ಹೊಸ ಉದ್ಯಾನವನ ನಿಮಿರ್ಸುವುದಕ್ಕೆ 89.19 ಲಕ್ಷ ರೂ.
– ಸಾಮಾಜಿಕ ಅರಣ್ಯೀಕರಣದಡಿ ಗಿಡ ನೆಡುವ ಕಾರ್ಯಕ್ರಮಕ್ಕೆ 8 ಲಕ್ಷ ರೂ.
ಸಾರ್ವಜನಿಕ ನಾಗರಿಕ ಸೌಲಭ್ಯಗಳನ್ನು ಒದಗಿಸಲು 8 ಲಕ್ಷ ರೂ.– ಅಮೃತ ನಿರ್ಮಲ ನಗರ ಯೋಜನೆಯಡಿ ಬಿಡುಗಡೆಯಾಗಿದ್ದ 50 ಲಕ್ಷ ರೂ. ಅನುದಾನದಡಿ ಸ್ವಚ್ಚತೆ ಮತ್ತು ನೈರ್ಮಲ್ಯತೆಗೆ ಆದ್ಯತೆ.
ಕೋಟ್:
ನಗರಸಭೆ ಅಧ್ಯಕ್ಷರಿಗೆ ಬಜೆಟ್ ಮಂಡಿಸುವ ಬಗ್ಗೆ ಪೂರ್ವಾಪರ ಜ್ಞಾನವಿಲ್ಲ. ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಓದುತ್ತಾರೆ. 40 ಕೊಟಿ ಕೊರತೆ ಬಜೆಟ್ ಮಂಡಿಸಿದ್ದು ನಗರಸಭೆ ಇತಿಹಾಸದಲ್ಲೇ ಇಲ್ಲ
– ಎಲ್.ಡಿ. ಚಂದಾವರಿ, ನಗರಸಭೆ ಪ್ರತಿಪಕ್ಷದ ನಾಯಕ
ಕೋಟ್:
ಆರು ಬಾರಿ ನಗರಸಭೆ ಸದಸ್ಯರಾದ ಎಲ್.ಡಿ. ಚಂದಾವರಿಗೆ ಬಜೆಟ್ ಮಂಡನೆ ವೇಳೆ ಹೇಗೆ ವತಿರ್ಸಬೇಕು ಎಂಬ ಪ್ರಜ್ಞೆ ಇಲ್ಲ. ಅವರಿಂದ ಕಲಿಯಬೇಕಾದದ್ದು ಏನು ಇಲ್ಲ. ವಿರೊಧ ವ್ಯಕ್ತಪಡಿಸುವುದೇ ಅವರ ಕಾಯಕ
– ಉಷಾ ದಾಸರ, ಅಧ್ಯಕ್ಷೆ