More

    ಕೊಲೆ ಆರೋಪಿಗಳಿಗೆ ಗುಂಡೇಟು / ಬಂಧನ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕೊಲೆ ಆರೋಪಿಯನ್ನು ಬಂಧಿಸುವಾಗ ಪೋಲಿಸರ ಮೇಲೆ ಆರೋಪಿ ಹಲ್ಲೆಗೆ ಮುಂದಾದಾಗ ಪೋಲಿಸರು ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿ, ವಶಕ್ಕೆ ಪಡೆದಿದ್ದಾರೆ.

    ಮಾಲೂರು ತಾಲ್ಲೂಕು, ಮಾಸ್ತಿ ಪೋಲಿಸ್ ಠಾಣೆಯ ವ್ಯಾಪ್ತಿಯ ಸಿ.ಆರ್. ನಂ.೬೮/೨೦೨೪ ಕೊಲೆ ಪ್ರಕರಣದ ಆರೋಪಿಗಳಾದ ಅನಿಲ್ ಬಿನ್ ರಾಜಪ್ಪ ೨೫, ಹಾಗೂ ಪ್ರಮೋದ್ ಬಿನ್ ರಾಜಪ್ಪ ೨೨, ಇವರುಗಳು ಅಡಗಿದ್ದ ಖಚಿತ ಮಾಹಿತಿ ಮೇರೆಗೆ ಭಾನುವಾರದ ಬೆಳ್ಳಿಗ್ಗಿನ ಜಾವ ಶ್ರೀನಿವಾಸಪುರ ಪೋಲಿಸ್ ಇನ್ಸ್ಪೆಕ್ಟರ್ ಗೊರವನಕೊಳ್ಳ ಹಾಗೂ ಕಾನ್ಸ್ಟೇಬಲ್ ನಿಖಿಲ್ ಮತ್ತು ವಾಸು ರವರುಗಳ ಮೇಲೆ ಆರೋಪಿಗಳು ಹಲ್ಲೆಗೆ ಮುಂದಾದಾಗ ಪೋಲಿಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

    ಕೋಲಾರ ತಾಲ್ಲೂಕು, ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಯ ಕೂರುಗಾಂಡಹಳ್ಳಿ ಗ್ರಾಮದ ಬಳಿಯ ತೋಪಿನಲ್ಲಿ ಆರೋಪಿಗಳು ಇರುವುದು ಖಚಿತ ಮಾಹಿತಿ ಪಡೆದ ಪೋಲಿಸರು ಬಂಧಿಸಲು ಹೋದ ಸಂದರ್ಭದಲ್ಲಿ ಆರೋಪಿಗಳು ಪೋಲಿಸರ ಮೇಲೆ ಹಲ್ಲೆ ಮಾಡಲು ಮುಂದಾದಾಗ ತಮ್ಮ ಆತ್ಮ ರಕ್ಷಣೆಗಾಗಿ ಇನ್ಸ್ಪೆಕ್ಟರ್ ಕಾಲಿಗೆ ಗುಂಡು ಹಾರಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ನಗರದ ಎಸ್.ಎನ್.ಆರ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಹಲ್ಲೆಗೊಳಗಾದ ಪೋಲಿಸ್ ಸಿಬ್ಬಂದಿಯನ್ನೂ ಸಹ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

    ಚಿತ್ರ ೧೪ ಕೆ.ಎಲ್.ಆರ್. ೦೮ : ಗುಂಡೇಟು ತಿಂದ ಕೊಲೆ ಆರೋಪಿಗಳಾದ ಅನಿಲ್ ಮತ್ತು ಪ್ರಮೋದ್

    ಕೊಲೆ ಆರೋಪಿಗಳಿಗೆ ಗುಂಡೇಟು / ಬಂಧನ
    ಕೊಲೆ ಆರೋಪಿಗಳಿಗೆ ಗುಂಡೇಟು / ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts