More

    ಕೆಂಭಾವಿ ಕ್ವಾರಂಟೈನ್ ಕೇಂದ್ರ ಭರ್ತಿ

    ಕೆಂಭಾವಿ: ಪಟ್ಟಣದ ಮುರಾಜರ್ಿ ದೇಸಾಯಿ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರ ಬುಧವಾರ ಸಂಪೂರ್ಣ ಭತರ್ಿಯಾಗಿದ್ದು, ಮುಂಬರುವ ವಲಸಿಗರನ್ನು ಎಲ್ಲಿ ಇರಿಸಬೇಕೆಂಬ ಚಿಂತೆ ಅಧಿಕಾರಿಗಳನ್ನ ಕಾಡುತ್ತಿದೆ. ಕಳೆದ ನಾಲ್ಕು ದಿನಗಳಿಂದ ತಾಲೂಕಿನಲ್ಲಿ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕೇಂದ್ರಗಳು ಭತರ್ಿಯಾಗುತ್ತಿವೆ. ಬುಧವಾರ ಮೂರು ಜನ ಗಭರ್ಿಣಿ ಮಹಿಳೆಯರು, 30 ಬಾಲಕರು ಹಾಗೂ 30 ಬಾಲಕಿಯರು ಸೇರಿ ಒಟ್ಟು 206 ಜನ ವಲಸಿಗರಿದ್ದು, ಅವರೆಲ್ಲರ ಆರೋಗ್ಯ ಚಿಂತೆ ಆರೋಗ್ಯ ಇಲಾಖೆ ಮಾಡುತ್ತಿದ್ದರೆ ಅವರ ಊಟ ವಸತಿ ಸೌಕರ್ಯಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ನಿಭಾಯಿಸುತ್ತಿದೆ. ಸುರಪುರ ಪಟ್ಟಣದಲ್ಲಿ ಮಂಗಳವಾರ ಎರಡು ಕರೊನಾ ಪಾಸಿಟಿವ್ ಪ್ರಕರಣ ಖಾತ್ರಿಯಾಗಿದ್ದು, ಇದರಿಂದ ನಿತ್ಯ ಈ ಕೇಂದ್ರಕ್ಕೆ ವಲಸಿಗರ ಸಂಖ್ಯೆಯ ಪ್ರಮಾಣ ಏರುತ್ತಿದ್ದು, ಇದರಿಂದ ಪಟ್ಟಣದ ಜನತೆಯಲ್ಲಿ ಭಯ ಕಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts