More

    ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್‌ಗೆ ಬೆಂಬಲ:ಮುಬಾಶೀರ್

    ಹಾಸನ: ರಾಜ್ಯದಲ್ಲಿ ಪಕ್ಷ ನೀಡಿರುವ ಜನಪರ ಯೋಜನೆಗಳನ್ನು ಅವಲೋಕಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತವನ್ನು ನೀಡುವಂತೆ ಆಜಾದ್ ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಮುಬಾಶೀರ್ ಅಹಮದ್ ಮನವಿ ಮಾಡಿದರು.
    ವಿದೇಶದಿಂದ ಕಪ್ಪು ಹಣ ವಾಪಸ್ ತರಲು ಹಾಗೂ ಪ್ರತಿಯೊಬ್ಬ ಭಾರತೀಯರ ಬ್ಯಾಂಕ್ ಖಾತೆಗೆ ಉಚಿತವಾಗಿ ಮೂರು ಲಕ್ಷ ರೂ. ಹಾಗೂ ಪ್ರತಿ ಕುಟುಂಬಕ್ಕೆ 15 ಲಕ್ಷ ರೂ. ನೀಡುವಂತಹ ಸುಳ್ಳು ಭರವಸೆಗಳನ್ನು ನೀಡಿ ಬಿಜೆಪಿ ಕಳೆದ ಒಂದು ದಶಕದಿಂದ ಸರ್ಕಾರ ನಡೆಸಿಕೊಂಡು ಬಂದಿದೆ. ಆದರೆ ಬಿಜೆಪಿ ಸರ್ಕಾರ ಕೊಟ್ಟ ಆಶ್ವಾಸನೆಗಳು ಮಾತ್ರ ಈಡೇರಲಿಲ್ಲ. ಹೀಗಾಗಿ ನಮ್ಮ ಸಮಿತಿ ಹಾಗೂ ಸಮುದಾಯದ ಬಂಧುಗಳು ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
    ಭಾರತೀಯರ ದೇಶಪ್ರೇಮ, ಜನರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇವರ ಕುತಂತ್ರಗಳನ್ನು ಭಾರತೀಯರು ಪ್ರಶ್ನಿಸಿದರೆ ಅದೊಂದು ದೇಶದ್ರೋಹವೆಂದು ಆರೋಪಿಸಿ ಅವರಿಗೆ ದೇಶದ್ರೋಹಿ ಎಂಬ ಪಟ್ಟ ಕಟ್ಟಲಾಗುತ್ತಿದೆ. ಇದು ಭಾರತೀಯರ, ದೇಶಪ್ರೇಮಿಗಳ ಹಾಗೂ ಸಂವಿಧಾನದ ಹತ್ಯಾಕಾಂಡವಾಗಿದೆ. ರಾಷ್ಟ್ರ ರಾಜಕಾರಣವನ್ನು ಸಮಗ್ರವಾಗಿ ಅರ್ಥಮಾಡಿಕೊಂಡು ಸುಭದ್ರ ಸರ್ಕಾರ ರಚಿಸಲು ಜನರು ಜಾಗೃತರಾಗಬೇಕು. ಕಾಂಗ್ರೆಸ್ ಪಕ್ಷ ನೀಡಿರುವ ಜನಪರ ಯೋಜನೆಗಳನ್ನು ಅವಲೋಕಿಸಿ ಸರ್ವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರಿಗೆ ಮತ ಹಾಕುವಂತೆ ಕೋರಿದರು.
    ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ವಾಸಿಂ ಖಾನ್ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts