More

    ಕಾಂಗ್ರೆಸ್ಸಿಗರ ಮನೆಗಳಿಗೆ ಟಿಪ್ಪು-ಘಜ್ನಿ ಹೆಸರಿಡಲಿ -ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿ

    ದಾವಣಗೆರೆ: ಟಿಪ್ಪು ಹೆಸರು ಜಪಿಸುವ ಕಾಂಗ್ರೆಸ್ ಸಚಿವರು, ಶಾಸಕರು, ಅವರ ಮನೆಗಳಿಗೆ ಟಿಪ್ಪು ನಿಲಯ, ಮಹಮ್ಮದ್ ಘಜ್ನಿ, ಜೌರಂಗಜೇಬ್ ನಿಲಯ ಎಂದು ಹೆಸರಿಟ್ಟುಕೊಳ್ಳಲಿ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕಿಡಿ ಕಾರಿದರು.
    ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪುಸುಲ್ತಾನ್ ಎಂಬುದಾಗಿ ಮರು ನಾಮಕರಣ ಮಾಡುವ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದರು.
    ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಲು ವಿರೋಧವಿದೆ. ಮೈಸೂರು ಮಹಾರಾಜರು, ಸುತ್ತೂರು ಶ್ರೀಗಳು ಮೊದಲಾದ ದಾರ್ಶನಿಕರ ಹೆಸರಿಡಿ. ಕಾಂಗ್ರೆಸ್ ಮುಖಂಡರಿಗೆ ಕೇವಲ ಮುಸ್ಲಿಂ ಅರಸರ ನೆನಪು ಬರುತ್ತದೆ. ಕುಕ್ಕರ್ ಬ್ಲಾಸ್ಟ್ ಮಾಡಿದವರನ್ನು ಡಿಕೆಶಿ ‘ನಮ್ಮ ಸಹೋದರರು’ ಅಂತ ಹೇಳುತ್ತಾರೆ. ಮತ ಬ್ಯಾಂಕ್‌ಗಾಗಿ ಮತಾಂಧರ ಹೆಸರು ಜಪಿಸುತ್ತಾರೆ ಎಂದು ಟೀಕಿಸಿದರು.
    ಸರ್ಕಾರಕ್ಕೆ ರೈತಪರ ಕಾಳಜಿ ಇದ್ದರೆ ಎಕರೆಗೆ 25 ಸಾವಿರ ರೂ.ಗಳ ಪರಿಹಾರ ಕೊಡಲಿ. ಘೋಷಣೆ ಮಾಡಿದ ಭರವಸೆಗಳು ಹಾಗೇ ಉಳಿದಿವೆ. ಈ ಸರ್ಕಾರದ ಅವಧಿಯಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಬಿಡುಗಡೆಯಾಗಿಲ್ಲ. ರೈತರು, ನೌಕರರಿಗೆ ನೀಡಿದ ಆಶ್ವಾಸನೆಗಳು ಈಡೇರಿಲ್ಲ. ಈ ಬಗ್ಗೆ ಹೊನ್ನಾಳಿಯಲ್ಲೂ ಪ್ರತಿಭಟನೆ ನಡೆಸಲಾಗುವುದು ಎಂದರು.
    ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಕ್ಕೆ ಬಿಜೆಪಿ ಶಾಸಕರು ಔತಣಕೂಟಕ್ಕೆ ಹೋಗಿದ್ದಾರೆ. ಅದು ಪಕ್ಷವಿರೋಧಿ ಚಟುವಟಿಕೆಯಲ್ಲ ಎಂದು ಸಮರ್ಥಿಸಿಕೊಂಡರು.
    * ಯತ್ನಾಳ್ ಹುಚ್ಚುನಾಯಿ
    ಬಸನಗೌಡ ಪಾಟೀಲ್ ಯತ್ನಾಳ್ ಒಂದು ಹುಚ್ಚು ನಾಯಿ ಇದ್ದಂತೆ. ನಾಯಿಗಿರುವ ನಿಯತ್ತು ಆ ಮನುಷ್ಯನಿಗಿಲ್ಲ. ಆನೆ ಬೀದಿಗಿಳಿದಾಗ ಹುಚ್ಚುನಾಯಿ ಬೊಗಳುತ್ತದೆ. ಹಾಗೆಂದು ಆನೆಗಿರುವ ಗೌರವ ಕಡಿಮೆಯಾಗುತ್ತದಾ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
    ಸೋಮಣ್ಣ ಸೋಲಿಗೆ ವಿಜಯೇಂದ್ರ ಕಾರಣ ಎಂದು ಹೇಳುವುದರಲ್ಲಿ ನಿಜವಿಲ್ಲ. ಶಿಕಾರಿಪುರದಲ್ಲಿ ವಿಜಯೇಂದ್ರರನ್ನು ಸೋಲಿಸಲು ಕುತಂತ್ರ ಮಾಡಿದವರು ಇಂಥವರೇ. 2018 ರಲ್ಲಿ ಸಚಿವ ಸ್ಥಾನ ಕೊಡದ್ದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಬೊಗಳೋದೇ ಇವರ ಸೀನಿಯಾರಿಟಿನಾ? ಬಿಎಸ್‌ವೈ, ವಿಜಯೇಂದ್ರ ವಿರುದ್ಧ ಬೊಗಳಲಿಕ್ಕೆ ಹೇಳಿಕೊಳ್ಳುವರು ಯಾರು ಎಂಬುದನ್ನು ತಿಳಿಸಲಿ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts