ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಕಿಮ್್ಸ ಆಸ್ಪತ್ರೆಯ ಕಿರಿಯ ವೈದ್ಯರು ಶುಕ್ರವಾರ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸಿದರು. ಕೆ.ಸಿ. ಜನರಲ್ ಹಾಗೂ ಬೆಳಗಾವಿಯ ಬೆಳಗಾವಿಯ ಬಿಮ್್ಸ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದವರನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಬೀದರ್ ಜಿಲ್ಲಾಧಿಕಾರಿ ವರ್ತನೆಗೆ ಖಂಡನೆ, ರಾಜ್ಯದ ಆಸ್ಪತ್ರೆ ಮತ್ತು ಕೋವಿಡ್ ಕೇಂದ್ರಗಳಿಗೆ ಸೂಕ್ತ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕಿರಿಯ ವೈದ್ಯರು ಸರ್ಕಾರವನ್ನು ಒತ್ತಾಯಿಸಿದರು.
ಕಿಮ್್ಸ ಕಿರಿಯ ವೈದ್ಯರ ಸಂಘದ ಅಧ್ಯಕ್ಷ ಡಾ. ಸುಹಾಸ್ ದೇಸಾಯಿ, ಡಾ. ಪ್ರೇಮ, ಡಾ. ಅರವಿಂದ, ಡಾ. ಶೃತಿ ಕುಲಕರ್ಣಿ, ಡಾ. ಶ್ವೇತಾ, ಡಾ. ನಾಗೇಂದ್ರ, ಡಾ. ಪ್ರಮೋದ ಇತರರಿದ್ದರು.