More

    ಎರಡು ಬೈಕ್, ಕಳ್ಳಬಟ್ಟಿ ವಶ

    ಮುಂಡರಗಿ: ಬೈಕ್​ನಲ್ಲಿ ಕಳ್ಳಬಟ್ಟಿ ಸಾರಾಯಿ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಅಬಕಾರಿ ಅಧಿಕಾರಿಗಳನ್ನು ಕಂಡು ಸಾರಾಯಿ ಮತ್ತು ಬೈಕ್​ಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ ಘಟನೆ ತಾಲೂಕಿನ ದಿಂಡೂರು ತಾಂಡಾ ಹಾಗೂ ಡೋಣಿ ತಾಂಡಾ ಮಧ್ಯೆ ಇತ್ತೀಚೆಗೆ ನಡೆದಿದೆ.

    ಇಬ್ಬರು ಸೇರಿ ದಿಂಡೂರ ತಾಂಡಾದಲ್ಲಿ ಸುಮಾರು 4 ಲೀಟರ್ ಕಳ್ಳಬಟ್ಟಿ ತಯಾರಿಸಿ ಡೋಣಿ ತಾಂಡಾಕ್ಕೆ ಸಾಗಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಮುಂಡರಗಿ ಅಬಕಾರಿ ಅಧಿಕಾರಿಗಳನ್ನು ಕಂಡು ತಕ್ಷಣ ಬೈಕ್ ಸಮೇತವಾಗಿ ಕಳ್ಳಬಟ್ಟಿ ಸಾರಾಯಿಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಅಧಿಕಾರಿಗಳಾದ ದೀಪಕ ಎಸ್., ವಿವೇಕಾನಂದ ಮಂಕಾಳೆ ಅವರು ಎರಡು ಬೈಕ್ ಮತ್ತು ಕಳ್ಳಬಟ್ಟಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಈ ಕುರಿತು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts