ಹುಬ್ಬಳ್ಳಿ: ಜೀತೋ ಬೆಂಗಳೂರ ಶಾಖೆಯ ಆಡಳಿತ ಮಂಡಳಿ ಸದಸ್ಯ ಭರತ್ಕುಮಾರ ಬಿ. ಜೈನ್ ಅವರು ನ್ಯಾಷನಲ್ ರೈಲ್ವೆ ಬಳಕೆದಾರರ ಸಲಹಾ ಸಮಿತಿಗೆ (ಎನ್ಆರ್ಯುುಸಿಸಿ) ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ನಗರದಲ್ಲಿ ಮಂಗಳವಾರ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ಜೆಡ್ಆರ್ಯುುಸಿಸಿ) ಸಭೆಯ ನಂತರ ಜರುಗಿದ ಚುನಾವಣೆಯಲ್ಲಿ ಇವರು ಶೇ. 81ರಷ್ಟು ಮತಗಳೊಂದಿಗೆ ಆಯ್ಕೆಯಾದರು.
ಈ ಮೂಲಕ ರೈಲ್ವೆ ಸಚಿವರು ಅಧ್ಯಕ್ಷರಾಗಿರುವ ಎನ್ಆರ್ಯುುಸಿಸಿಯ ಸದಸ್ಯರಾದ ಇವರು, ಸಮಿತಿಯಲ್ಲಿ ನೈಋತ್ಯ ರೈಲ್ವೆ ವಲಯವನ್ನು ಪ್ರತಿನಿಧಿಸಲಿದ್ದಾರೆ.
ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಅಧ್ಯಕ್ಷತೆಯಲ್ಲಿ ಜರುಗಿದ 22ನೇ ಜೆಡ್ಆರ್ಯುುಸಿಸಿ ಸಭೆಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಶಿ, ಗೋವಾ ಸಚಿವ ನಿಲೇಶ ಕೆ., ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಎಫ್ಕೆಸಿಸಿಐ ಅಧ್ಯಕ್ಷ ಗೋಪಾಲ ರೆಡ್ಡಿ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.
48 ಜನ ಸದಸ್ಯರನ್ನು ಹೊಂದಿರುವ ಜೆಡ್ಆರ್ಯುುಸಿಸಿಯಲ್ಲಿ 33 ಸದಸ್ಯರು ಸಭೆಗೆ ಹಾಜರಾಗಿ, ಮತದಾನ ಮಾಡಿದರು. ಮೂವರು ಚುನಾವಣೆಗೆ ಸ್ಪರ್ಧಿಸಿದ್ದರು. ಇದರಲ್ಲಿ ಭರತ್ಕುಮಾರ ಜೈನ್ 27, ಕೃಷ್ಣಮೂರ್ತಿ 5 ಹಾಗೂ ಬಾಲಚಂದ್ರ ಅವರು ಒಂದು ಮತ ಪಡೆದರು ಎಂದು ತಿಳಿಸಲಾಗಿದೆ.
ಪ್ರಮುಖರಾದ ದಾಮೋದರ ರಾಟಿ, ರತನಚಂದ್, ಚಿದಾನಂದ ಚಲವಾದಿ, ಸುರೇಶ ಜೈನ್, ಅಶೋಕ ಅಮಿನಗಡ, ಬಾಬುಲಾಲ್ ಜೈನ್, ಲಲಿತ ಜೈನ್, ಭವರಲಾಲ್ ಜೈನ್, ಗೋಪಾಲ ರೆಡ್ಡಿ, ಇತರರು ಭರತ್ಕುಮಾರ ಅವರನ್ನು ಪುಷ್ಪಗುಚ್ಛ ನೀಡಿ, ಅಭಿನಂದಿಸಿದರು.
ಆಯ್ಕೆಯಾದ ನಂತರ ಮಾತನಾಡಿದ ಭರತ್ಕುಮಾರ ಅವರು, ಸದ್ಯ ಡಿಆರ್ಯುುಸಿಸಿ, ಜೆಡ್ಆರ್ಯುುಸಿಸಿ ಹಾಗೂ ಎನ್ಆರ್ಯುುಸಿಸಿ ಇವುಗಳ ಅಧಿಕಾರವಧಿ ಒಂದೇ ತೆರನಾಗಿಲ್ಲ. ಇದರಿಂದ ರೈಲ್ವೆ ಬಳಕೆದಾರರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ. ಹಾಗಾಗಿ, ಈ ಮೂರು ಸಮಿತಿಗಳ ಅಧಿಕಾರವಧಿಯಲ್ಲಿ ಸಮನ್ವಯತೆ ಸಾಧಿಸಲು ಸಂಬಂಧಪಟ್ಟವರ ಜತೆ ರ್ಚಚಿಸುವುದಾಗಿ ತಿಳಿಸಿದರು.