More

    ಅತಿ ರಾಸಾಯನಿಕ ಬಳಕೆ ಆರೋಗ್ಯಕ್ಕೆ ಹಾನಿ -ತೋಟಗಾರಿಕೆ ವಿಜ್ಞಾನಿ ಬಸವನಗೌಡ ಹೇಳಿಕೆ 

    ದಾವಣಗೆರೆ: ತರಕಾರಿ ಬೆಳೆಗಳಲ್ಲಿ ಅತಿ ರಾಸಾಯನಿಕ ಗೊಬ್ಬರ ಬಳಕೆಯಿಂದ ನಮ್ಮ ಆರೋಗ್ಯದಲ್ಲಿ ಏರುಪೇರು ಆಗುತ್ತಿವೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿದರು.
    ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಜಗಳೂರು ತಾಲೂಕಿನ ಹಿರೇಅರಕೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮೆಣಸಿನಕಾಯಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಇಂದು ಪ್ರಕೃತಿ ವಿಕೋಪದಿಂದ ತರಕಾರಿ ಬೆಳೆಗಳಲ್ಲಿ ಅಕಾಲಿಕ ರೋಗ, ಕೀಟಗಳ ಭಾದೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ರೈತರು ಬರೀ ರಾಸಾಯನಿಕಗಳ ಬಳಕೆಗೆ ಮಾರುಹೋಗದೇ, ಜೈವಿಕ ಹಾಗೂ ನೈಸರ್ಗಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು.
    ತರಕಾರಿ ವಿಶೇಷ ಲಘು ಪೋಷಕಾಂಶದ ಬಳಕೆ ಹಾಗೂ ಹಳದಿ ಮತ್ತು ನೀಲಿ ಅಂಟುಪಟ್ಟಿ ಬಳಕೆಯಿಂದ ಉತ್ತಮ ಹೂ ಮತ್ತು ಕಾಯಿಗಳನ್ನು ಪಡೆಯುವುದಲ್ಲದೇ ಕೀಟಗಳ ಹಾನಿ ಮಟ್ಟವನ್ನು ನಿಖರತೆಯಿಂದ ನಿರ್ಧರಿಸಲು ಸಹಾಯವಾಗಲಿದೆ ಎಂದು ಮಾಹಿತಿ ನೀಡಿದರು.
    ಮಣ್ಣು ವಿಜ್ಞಾನಿ ಎಚ್. ಎಂ. ಸಣ್ಣಗೌಡ್ರ ಮಾತನಾಡಿ, ತರಕಾರಿ ಬೆಳೆಗಳಲ್ಲಿ ಬೆಳೆ ಪರಿವರ್ತನೆ, ಮಣ್ಣು ಪರೀಕ್ಷೆಯ ಆಧಾರದಲ್ಲಿ ಪೋಷಕಾಂಶಗಳ ಬಳಕೆ, ಜೈವಿಕ ಗೊಬ್ಬರಗಳ ಬಳಕೆಯಿಂದ ನಾವು ಗುಣಮಟ್ಟದ ಫಸಲನ್ನು ಪಡೆಯಲು ಸಾಧ್ಯ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ರೈತರಾದ ನಾಗೇಂದ್ರಪ್ಪ, ಬಸವರಾಜ, ಲೋಹಿತ್‌ಕುಮಾರ್ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts